July 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ ಪಲ್ಗುಣಿ ನದಿ ಪರಿಸರದಲ್ಲಿ ನೀರು ನಾಯಿ

ಗರ್ಡಾಡಿ ಗ್ರಾಮದ ಕುಬಳಬೆಟ್ಟು ಗುತ್ತು ಪರಿಸರದ ಪಲ್ಗುಣಿ ನದಿ ತಟದ ಹಳ್ಳದಲ್ಲಿ ಕಳೆದ ಕೆಲವು ದಿನಗಳಿಂದ ನೀರು ನಾಯಿಗಳು ಕಂಡು ಬರುತ್ತಿವೆ.

ಇಲ್ಲಿನ ಕೆ. ಸಂಪತ್ ಕುಮಾರ್ ಕೊಂಬ ಎಂಬವರ ಮನೆಯ ಸಮೀಪ ಕೃಷಿ ತೋಟದಲ್ಲಿ ಹರಿಯುವ ಹಳ್ಳದಲ್ಲಿ ಆಗಾಗ ನೀರು ನಾಯಿಗಳು ಕಂಡು ಬರುತ್ತಿವೆ. ಈ ಹಿಂದಿನ ವರ್ಷಗಳಲ್ಲೂ ಈ ಸ್ಥಳದಲ್ಲಿ ನೀರು ನಾಯಿಗಳು ಕಂಡುಬಂದಿದ್ದವು.
ಸಮೀಪದಲ್ಲಿ ಹರಿಯುವ ಪಲ್ಗುಣಿ ನದಿಯನ್ನು ಸೇರುವ ಈ ಹಳ್ಳದಲ್ಲಿ ಸುಮಾರು ಹತ್ತಕ್ಕಿಂತ ಅಧಿಕ ನೀರು ನಾಯಿ ಮರಿಗಳು ಆಗಾಗ ಆಟ ಆಡುವುದು ಕಂಡುಬರುತ್ತಿದೆ. ಆದರೆ ದೊಡ್ಡ ನೀರು ನಾಯಿಗಳು ಹಳ್ಳದಲ್ಲಿ ಬರುವುದು ತೀರಾ ಅಪರೂಪ. ಪಲ್ಗುಣಿ ನದಿ ತಟದಲ್ಲಿ ಸುಮಾರು 25ಕ್ಕಿಂತ ಅಧಿಕ ನೀರು ನಾಯಿಗಳು ಇರುವ ಶಂಕೆ ವ್ಯಕ್ತವಾಗಿದೆ.

ನೀರು ನಾಯಿ ಸಂತತಿ ಅಳಿವಿನಂಚಿನಲ್ಲಿದೆ. ಪಲ್ಗುಣಿ ನದಿ ಪ್ರದೇಶದ ಕುಬಳಬೆಟ್ಟು ಪರಿಸರದಲ್ಲಿ ಮಾತ್ರ ಹೆಚ್ಚಾಗಿ ಇವು ಕಂಡುಬರುತ್ತಿವೆ.

ಪಲ್ಗುಣಿ ನದಿ ಪ್ರದೇಶದ ಈ ಪರಿಸರದಲ್ಲಿ ಜನರು ಪ್ರಸ್ತುತ ನದಿಯತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆ ಇದ್ದು ನದಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ಈ ಕಾರಣದಿಂದ ನೀರು ನಾಯಿಗಳು ಆಗಾಗ ಆಹಾರ ಅರಸಿಕೊಂಡು ಹಳ್ಳದತ್ತ ಬರುತ್ತಿವೆ.

Related posts

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಜ.7: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂತ್ರರೋಗ ತಪಾಸಣಾ ಶಿಬಿರ

Suddi Udaya

ಸೆ.30: ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆಯಿಂದ 48 ಗ್ರಾ. ಪಂ. ಪಶುಸಖಿಯವರಿಗೆ ಉಚಿತವಾಗಿ ಕಿಟ್ ವಿತರಣೆ

Suddi Udaya

ಉಜಿರೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಪ್ತಾಹ ಸಮಾರೋಪ

Suddi Udaya

ಆ 17: ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

Suddi Udaya

ಪಾಸ್ಕ ಹಬ್ಬದ ಅಂಗವಾಗಿ ಹನ್ನೆರಡು ಜನ ಶಿಷ್ಯರ ಕಾಲುಗಳನ್ನು ತೊಳೆದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್

Suddi Udaya
error: Content is protected !!