ನಾರಾವಿ: ತುಳಸಿ ಕ್ರಿಯೇಷನ್ ನಾರಾವಿ ಅರ್ಪಿಸುವ ಸುಜಿತ್ ಎಸ್ ನಾರಾವಿ ಇವರ ಸಾಹಿತ್ಯ ನಿರ್ದೇಶನ, ಹಾಗೂ ರಶ್ಮಿ ಆರ್ ನಾರಾವಿ ಗಾಯನದಿಂದ ಮೂಡಿಬಂದಿರುವ ಶ್ರೀ ಸೂರ್ಯನಾರಾಯಣ ದೇವರ ತುಳು ಭಕ್ತಿ ಗೀತೆ “ನಾರಾವಿದ ಸೂರ್ಯದೇವೆರ್” ಇದರ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಜು.16ರಂದು ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಆರ್ಚಕ ಕೃಷ್ಣ ತಂತ್ರಿ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೋಟ್ಟು, ಈದು ಶ್ರೀ ಕ್ಷೇತ್ರ ಮೂಜಿಲ್ನಾಯ ಮೊಕ್ತೇಸರರು ಅಶೋಕ್ ಕುಮಾರ್ ಜೈನ್, ಸಹಮೋಕ್ತೇಸರರು ಜಗದೀಶ್ ಹೆಗ್ಡೆ, ಮಿತ್ರ ಶೆಟ್ಟಿ ಶಿವಸದನ ಈದು, ಪ್ರಮೋದ್ ಕುಲಾಲ್ ಹೊಸ್ಮಾರು, ಪ್ರಶಾಂತ್ ಚಿತ್ತಾರ, ಕಿಟ್ಟ ಹೆಗ್ಡೆ ಡೊಂಕಬೆಟ್ಟು,
ಹೊಸ್ಮರ್ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಆಚಾರ್ಯ, ಚಂದ್ರಶೇಖರ್ ಡಿ ಕೆ ಶ್ರೀ ರಾಮಾಂಜನೇಯ ಶಾಮಿಯಾನ,
ದಿನೇಶ್ ಶೆಟ್ಟಿ ಅಂಕಿತ ಜನರಲ್ ಸ್ಟೋರ್ ಈದು ಉಪಸ್ಥಿತರಿದ್ದರು.















