ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ದ.ಕ. ಜಿಲ್ಲೆಯ ಕೋಳಿ ಸಾಕನಿಕೇದಾರರ ಸಮಾಲೋಚನಾ ಸಭೆಯು ಜು.19ರಂದು ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದಲ್ಲಿ ಜರುಗಿತು.
ಸುಮಾರು 35 ದಕ್ಕೂ ಹೆಚ್ಚು ಸಾಕಾಣಿದಾರರ ಸಹಭಾಗಿತ್ವದಲ್ಲಿ ಪ್ರಮುಖರಾದ ಪಕಾಶ್ ಪರಾರಿ ನಾರಾಯಣ ಪೂಜಾರಿ ಉಚ್ಚುರು ಗುರುಪ್ರಶಾಂತ್ ಸುದೆಕಾರ್ ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಸಂತೋಷ್ ಬೆಳಲ್ ಇವರುಗಳ ಮಾರ್ಗದರ್ಶನದಲ್ಲಿ ಕೋಳಿ ಸಾಕಾಣಿಕ ವೆಚ್ಚವನ್ನು ರೂ.ಕನಿಷ್ಠ 10 ಮಾಡಲು ರಾಜ್ಯದ್ಯಕ್ಷರಾದ ಚಂದ್ರಶೇಖರ ಇವರ ನೇತೃತ್ವದಲ್ಲಿ ಹೋರಾಟಕ್ಕೆ ಎಲ್ಲರೂ ಸೇರುವುದೆಂದು ಒಕ್ಕೊರೊಳ ಸಹಮತದಿಂದ ತೀರ್ಮಾನಿಸಲಾಯಿತು.
ಈ ಸಮಾಲೋಚನೆ ಸಭೆಯಲ್ಲಿ ತುಳುನಾಡ ಕೋಳಿ ಸಾಕಾಣಿಕ ಒಕ್ಕೂಟದ ಉಪಾಧ್ಯಕ್ಷ ಮತ್ತು ಸಂಘಟನಾ ಕಾರ್ಯದರ್ಶಿ ಭಾಗವಹಿಸಿ ಸೂಕ್ತ ಸಲಹೆ ಸೂಚಯನ್ನು ನೀಡಿದರು. ಈ ಸಂದರ್ಭದಲ್ಲಿ ಪಡಂಗಡಿ ಗ್ರಾಮದ ತುಂಗಮ್ಮ ಶೆಟ್ಟಿಯವರ ಕಳೆದ 3 ತಿಂಗಳ ಹಿಂದೆ ಕೋಳಿ ಸಾಕಾಣಿಕ ಘಟಕವು ಸಂಪೂರ್ಣ ನಾಷ ಗೊಂಡಿದ್ದು ಇವರಿಗೆ ಸಂಘದಿಂದ ದಾನಿಗಳ ಸಹಾಯದಿಂದ ಹಣಕಾಸಿನ ನೆರವನ್ನು ನೀಡಲಾಯಿತು. ಸಂತೋಷ ಬೆಳಾಲು ಸ್ವಾಗತಿಸಿದರು. ಪ್ರಕಾಶ್ ಪರಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಧನ್ಯವಾದ ನೀಡಿದರು.















