ಬೆಳ್ತಂಗಡಿ: ತಾಲೂಕಿನ ಪ್ರಸ್ತುತ ಬೆಳ್ತಂಗಡಿ, ಕೊಕ್ಕಡ, ವೇಣೂರು ನಾಡಕಚೇರಿಗಳಲ್ಲಿ ಸರ್ವರ್ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಅಗತ್ಯ ಸೇವೆಗಳು ತಾತ್ಕಲಿಕವಾಗಿ ವಿಳಂಬಗೊಂಡಿದ್ದು ಸಾರ್ವಜನಿಕರು ಹೈರಾಣಾಗಿದ್ದಾರೆ.
ರಾಜ್ಯದ್ಯಾಂತ ನಾಡಕಚೇರಿಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಒಂದೇಡೆ ಜಡಿ ಮಳೆ ಸುರಿಯುತ್ತಿದ್ದು ಸೋಮವಾರ ಸಂತೆಯ ಭರಾಟೆಯೊಂದಡೆಯಾದರೆ ಸಾರ್ವಜನಿಕರು ತಾಲೂಕು ಕಚೇರಿಗೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ ಸಹಿತ ಇತರ ಸೇವೆಗಳಿಗೆ ಕಚೇರಿಗೆ ಆಗಮಿಸಿದ ಜನರು ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹೈರಣಾಗಿದ್ದಾರೆ.
ಕಳೆದ ಶನಿವಾರದಿಂದ ಈ ಸಮಸ್ಯೆ ಕಾಣಿಸಿಕೊಂಡಿದ್ದು ಜು.20ರಂದು ತೀವ್ರಗೊಂಡಿದೆ. ಇಂದು ಇದುವರೆಗೆ ಕೇವಲ 5/6 ಕಡತಗಳು ಮಾತ್ರ ಆನಲೈನ್ನಲ್ಲಿ ಸ್ವೀಕಾರಗೊಂಡಿದೆ. ಉಳಿದ ದಿನಗಳಲ್ಲಿ 60-65 ಕಡತಗಳು ಅಪ್ಲೋಡ್ ಆಗುತ್ತದೆ. ವಿದ್ಯಾರ್ಥಿಗಳು ಸಹಿತ ಇತರರ ಜಾತಿ ಆದಾಯ ಪ್ರಮಾಣ ಪತ್ರಕ್ಕೆ, ವಂಶವೃಕ್ಷ, ಪಿಂಚಣಿ ಸೇವೆಗಳಿಗೆ ಸರ್ವರ್ ಸಮಸ್ಯೆ ಭಾದಕವಾಗಿದ್ದು ಈ ಸಮಸ್ಯೆ ಎಂದು ಸರಿಯಾಗುತ್ತದೆ ಎಂಬುವುದು ಕಾದುನೋಡಬೇಕಿದೆ…















