ಮುಂಡೂರು : ಮುಂಡೂರು ಮಂಗಳಗಿರಿ ಶ್ರೀ ನಾಗಾಂಬಿಕ ಭಜನಾ ಮಂಡಳಿಯ ಎಲ್ಲಾ ಸದಸ್ಯರಿಗೆ ಧಾರ್ಮಿಕ ಚಿಂತಕ ಜಯರಾಮ ಶೆಟ್ಟಿ ಮದಡ್ಕ ಇವರು ಸಮವಸ್ತ್ರವನ್ನು ಆಡಳಿತ ಮೊಕ್ತೇಸರ ರಾಜೀವ್ ಅವರ ಉಪಸ್ಥಿತಿಯಲ್ಲಿ
ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮವು ಮುಂಡೂರು ಶ್ರೀ ನಾಗಕಲ್ಲುರ್ಟಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಜಯರಾಮ ಶೆಟ್ಟಿ ಮಾತನಾಡಿ ಸಮಾಜದ ಎಲ್ಲ ಮಕ್ಕಳಲ್ಲಿ ಸಂಸ್ಕಾರ, ಧಾರ್ಮಿಕ ಚಿಂತನೆ ಬೆಳೆಯಬೇಕು ಪೋಷಕರಿಗೆ ಹಾಗೂ ಹಿರಿಯರಿಗೆ ಗೌರವವನ್ನು ಕೊಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಭಜನಾ ತರಬೇತುದಾರ ಸಂದೇಶ್ ಸುವರ್ಣ ಮದ್ದಡ್ಕ, ಮಂಡಳಿಯ ಕಾರ್ಯದರ್ಶಿ ಜಯರಾಜ್ ಬಂಗೇರ, ಮಂಡಳಿಯ ಜವಾಬ್ದಾರಿಯನ್ನು ನಿಭಾಯಿಸುವ ಕುಮಾರಿ ಅನುಷಾ ಆಚಾರ್ಯ ಹಾಗೂ ಎಲ್ಲಾ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.















