September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿಶಿಲ: ಬೈಕ್ ಮೇಲೆ ಬಿದ್ದ ಮರ: ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರು

ಶಿಶಿಲ : ಅರಸಿನಮಕ್ಕಿ-ಶಿಶಿಲ ರಸ್ತೆಯ ಬರ್ಗುಳ ಸಮೀಪ ಇಂದು(ಜು.24) ಮಧ್ಯಾಹ್ನ ವೇಳೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಬಿದ್ದ ಘಟನೆ ನಡೆದಿದೆ.

ಶಿಶಿಲ ದೇನೋಡಿ ನಿವಾಸಿ ರತೀಶ್ ಪೂಜಾರಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಮರ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್‌ಗೆ ಹಾನಿಯಾಗಿದ್ದು, ರತೀಶ್ ಪೂಜಾರಿ ಅವರು ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ -ಶಿಶಿಲ ಘಟಕದ ಸದಸ್ಯರಾದ ಅವಿನಾಶ್ ಭಿಡೆ ,ರಮೇಶ್ ಬಿ, ರಾಧಾಕೃಷ್ಣ , ಕುಶಾಲಪ್ಪ ಗೌಡ, ಸ್ಥಳೀಯರಾದ ಮೋಹನ್ ಗೌಡ, ಮಾಧವ ನಾಯ್ಕ, ಲಕ್ಷ್ಮಣ ಆಚಾರ್, ಕೃಷ್ಣ ನಾಯ್ಕ ಮುಂತಾದವರು ಮರವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು.


ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಮೆಸ್ಕಾಂ ಸಿಬ್ಬಂದಿ ಸಂತೋಷ್ ಭೇಟಿ ನೀಡಿ ಕಂಬಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.

Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿಯ ಧರ್ಮದರ್ಶಿ ಹರೀಶ್ ದಂಪತಿಗಳಿಂದ ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಂದಗೋಕುಲ ಗೋಶಾಲೆಗೆ ಗೊಗ್ರಾಸಕ್ಕಾಗಿ ರೂ.25,000 ದೇಣಿಗೆ ಹಸ್ತಾಂತರ

Suddi Udaya

ಹುಣ್ಸೆಕಟ್ಟೆ ಕಡೆಮಾರು ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya

ಮಿತ್ತಬಾಗಿಲು: ತೋಟಕ್ಕೆ ನುಗ್ಗಿದ ಆನೆ; ಅಪಾರ ಕೃಷಿ ಹಾನಿ

Suddi Udaya

ಗೇರುಕಟ್ಟೆ : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಾನುವಾರು ಆರೋಗ್ಯ ಮಾಹಿತಿ ಶಿಬಿರ

Suddi Udaya

ಧರ್ಮಸ್ಥಳ ಪ್ರಕರಣದಲ್ಲಿ ಸರಕಾರ ತುರ್ತು ನಿರ್ಧಾರ ಮಾಡಿದೆ : ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು

Suddi Udaya

ಮಡಂತ್ಯಾರು ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya
error: Content is protected !!