July 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ : ವಿ.ಹಿಂ.ಪ. ಬಜರಂಗದಳ ಕಲ್ಮಂಜ ಘಟಕದ ಸಮಿತಿ ಪುನರ್ ರಚನೆ

ಕಲ್ಮಂಜ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಲ್ಮಂಜ ಘಟಕ ಪುನರ್ ರಚನೆ ಜು.23 ರಂದು ವಿಶ್ವ ಹಿಂದೂ ಪರಿಷತ್ತಿನ ಹಿರಿಯರು ಮೋಹನ್ ರಾವ್ ಕಲ್ಮಂಜ ರವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪುತ್ತೂರು ಬಜರಂಗದಳ ಜಿಲ್ಲಾ ಸಹ ಸಯೋಜಕ ದಿನೇಶ್ ಚಾರ್ಮಾಡಿ ಮಾತನಾಡಿ ಸಂಘಟನೆಯ ಉದ್ದೇಶಗಳ ಬಗ್ಗೆ ತಿಳಿಸಿದರು. ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ವಿಷ್ಣು ಮಾರಾಠೆಯವರ ಸಮ್ಮುಖದಲ್ಲಿ ಕಲ್ಮಂಜ ಘಟಕದ ಜವಾಬ್ದಾರಿಯನ್ನು ಆಯ್ಕೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷದ್ ಕಲ್ಮಂಜ ಘಟಕದ ಅದ್ಯಕ್ಷರಾಗಿ ಸಾಂತಪ್ಪ ಮದಿಮಲ್ಕಟ್ಟೆ, ಉಪಾಧ್ಯಕ್ಷರಾಗಿ ದಿನೇಶ್ ಗೌಡ ಬನದಬೈಲು, ಕಾರ್ಯದರ್ಶಿ ಸಂದೀಪ್ ಪರಾರಿಮಜಲು, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಮುಂಚಾಣ, ಬಜರಂಗದಳ‌ ಸಂಚಾಲಕರಾಗಿ ಜಗದೀಶ್, ಸಹ ಸಂಯೋಜಕರಾಗಿ ಧನಂಜಯ ಮದ್ಮಲ್ಕಟ್ಟೆ, ವಿಶ್ವ ಹಿಂದೂ ಪರಿಷದ್ ಗೋರಕ್ಷಾ ಪ್ರಮುಖ್‌ ಜಯಾನಂದ ಕಲ್ಮಂಜ, ಬಜರಂಗದಳ‌ ಗೋರಕ್ಷಾ ಪ್ರಮುಖ್ ಮುರಳೀಧರ ಗೌಡ, ಸುರಕ್ಷಾ ಪ್ರಮುಖ್ ಪುರಕ್ಷಿತ್, ವಿದ್ಯಾರ್ಥಿ ಪ್ರಮುಖ್‌ ಭರತೇಶ್ ಮದ್ಮಲ್ಕಟ್ಟೆ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಹಿರಿಯರು ಮೋಹನ್ ರಾವ್ ಕಲ್ಮಂಜ, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡದ‌ ಅಧ್ಯಕ್ಷರು ವಿಷ್ಣು ಮರಾಠೆ, ಬಜರಂಗದಳ‌ ಪುತ್ತೂರು ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಬೆಳ್ತಂಗಡಿ ಪ್ರಖಂಡದ‌ ಪ್ರಚಾರ ಪ್ರಸಾರ ಪ್ರಮುಖ್‌ ನಾಗೇಶ್ ಕಲ್ಮಂಜ, ಬಜರಂಗದಳ‌ ಬೆಳ್ತಂಗಡಿ ಪ್ರಖಂಡ ಬಲೋಪಸನಾ ಪ್ರಮುಖ್ ಮುನೀಷ್ ಉಜಿರೆ, ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ, ಪ್ರವೀಣ್ ಕರಿಯನೆಲ, ಕೃಷ್ಣಮೂರ್ತಿ ಹೆಬ್ಬಾರ್,ಅನಿಲ್ ಮದ್ಮಲ್ಕಟ್ಟೆ, ಮೋಹನ್ ಕುಮಾರ್ ಹಾಗೂ ವಿ.ಹಿಂ.ಪ ಬಜರಂಗದಳ‌ ಕಲ್ಮಂಜ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಸೌತಡ್ಕಕ್ಕೆ ಪುತ್ತೂರಿನ ಉದ್ಯಮಿ ದಿನೇಶ್ ರೈ ರವರಿಂದ 75 ಕೆ.ಜಿ.ಯ ಘಂಟೆ ಸಮರ್ಪಣೆ

Suddi Udaya

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಬಂದಾರು ಗ್ರಾಮ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ: ಕನ್ನಾಜೆಯ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ಬೃಹತ್ ಕಾರ್ಮಿಕ ಜಾಗೃತಿ ಆಂದೋಲನವನ್ನು ಆಯೋಜಿಸುವ ಕುರಿತು ಸಮಾಲೋಚನ ಸಭೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಕಾಂಬೋಡಿಯ ತಂಡದಿಂದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

Suddi Udaya
error: Content is protected !!