28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಬಂಟರ ವಲಯ ಸಮಿತಿ ವತಿಯಿಂದ ಆಟಿಡೊಂಜಿ ದಿನ

ಬೆಳ್ತಂಗಡಿ: ಬಂಟರ ವಲಯ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಲಾಯಿಲ ಗ್ರಾಮದ ಕರ್ನೊಡಿ “ಜಯಭವಾನಿ” ಮನೆಯ ವಠಾರದಲ್ಲಿ ಜು. 26 ರಂದು ನಡೆಯಿತು.‌

ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಉದ್ಘಾಟಿಸಿ ಆಟಿ ಕೂಟ ಕಾರ್ಯಕ್ರಮದ ಮಹತ್ಚವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊಟೇಲ್ ಕಂಫರ್ಟ್ ಇನ್, ದೇರಳಕಟ್ಟೆ ಮಾಲಕ ಚಂದ್ರಹಾಸ ಶೆಟ್ಟಿ ಮಾತನಾಡಿ ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುತಿದ್ದ ವಿವಿಧ ಔಷಧಿಯ ಗುಣಗಳುಳ್ಳ ಆಹಾರ ಖಾದ್ಯಗಳನ್ನು ಸೇವಿಸುತ್ತ  ಆರೋಗ್ಯದ ಕಾಳಜಿ ವಹಿಸುತಿದ್ದರು.  ಆಗಿನ ಕಾಲದ ಆಹಾರ ಪದ್ದತಿಗಳನ್ನು, ಇಂತಹ ಕಾರ್ಯಕ್ರಮಗಳ ಮೂಲಕ ಈಗಿನ ಯುವ ಜನತೆಗೆ ಮಾಹಿತಿ ತಿಳಿಯ ಪಡಿಸುವ ಅಗತ್ಯತೆ ಇದೆ ಈ ನಿಟ್ಟಿನಲ್ಲಿ ಆಟಿದಕೂಟ ಕಾರ್ಯಕ್ರಮಗಳು ಅಯೋಜಿಸಿರುವುದು ಬಹಳ ಅರ್ಥಪೂರ್ಣ ಎಂದರು.

ಡಾ.ಮಂಜುಶ್ರೀ ಚಂದ್ರಹಾಸ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಗೌರವಿಸಲಾಯಿತು. ವಲಯ ಸಮಿತಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಕರ್ನೊಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಇಷ್ಟೊಂದು ಅಚ್ಚುಕಟ್ಟಾಗಿ ಮೂಡಿಬರಲು ಹಾಗೂ ಯಶಸ್ವಿಯಾಗಿ ನಡೆಯಲು ಶ್ರಮ ವಹಿಸಿದ ಎಲ್ಲರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಜಿತ್ ಜಿ ಶೆಟ್ಟಿ, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ವಂದನ ರೈ, ವಿಠಲ ಶೆಟ್ಟಿ ಶ್ರದ್ಧಾ ಲಾಯಿಲ,   ಸುರೇಶ್ ಶೆಟ್ಟಿ, ವಸಂತ ಶೆಟ್ಟಿ, ಸಂಸ್ಕ್ರತಿ ಶೆಟ್ಟಿ ಸೇರಿದಂತೆ ವಲಯ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು. ವಲಯ ಸಮಿತಿ ಕಾರ್ಯದರ್ಶಿ ಆಶೋಕ್ ಶೆಟ್ಟಿ ಲಾಯಿಲ ಪ್ರಸ್ತಾವಿಸಿ ಸ್ವಾಗತಿಸಿದರು.ರಘಚಂದ್ರ ಶೆಟ್ಟಿ ದನ್ಯವಾದವಿತ್ತರು.ಸೋನಾಕ್ಷಿ ವಿಭ ರೈ ಕಾರ್ಯಕ್ರಮ ನಿರ್ವಹಿಸಿದರು.

ಬೆಳಗ್ಗಿನಿಂದ ಸಂಜೆಯವರೆಗೆ ಪುಟಾಣಿ ಮಕ್ಕಳು ಸಹಿತ ಎಲ್ಲರಿಗೂ ಕ್ರೀಡಾಕೂಟವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಲಯದ ವಿವಿಧ ಮನೆಗಳಿಂದ ತಯಾರಿಸಿ ತಂದಿದ್ದ ಸುಮಾರು 70 ಕ್ಕಿಂತಲೂ ಅಧಿಕ ಬಗೆಯ ವಿವಿಧ ಆಹಾರ ಖಾಧ್ಯಗಳು ಎಲ್ಲರ ಗಮನಸೆಳೆದವು. ಸಂಜೆ ಪುರುಷರ ,ಮಹಿಳೆಯರ ಹಗ್ಗಜಗ್ಗಾಟ ಕ್ರೀಡೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.ಲಾಯಿಲ, ನಡ, ಕನ್ಯಾಡಿ,ಗುರಿಪಳ್ಳ, ನಾವೂರು,ಸವಣಾಲು,ಮೇಲಂತಬೆಟ್ಟು,ಬೆಳ್ತಂಗಡಿ ಗ್ರಾಮಸಮಿತಿಗಳ ಸುಮಾರು 700 ಮಂದಿ ಬಂಟ ಭಾಂಧವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ತಾಲೂಕಿನ‌ ವಿವಿಧ ವಲಯ ಸಮಿತಿಗಳ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ಜನಸ್ಪಂದನ ಸಭೆಯ ಫಲಶ್ರುತಿ 108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ

Suddi Udaya

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ತಣ್ಣೀರುಪಂತ: ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವಾರ್ಷಿಕ ಜಾತ್ರೋತ್ಸವ

Suddi Udaya

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ಧರ್ಮಸ್ಥಳದಲ್ಲಿ 812 ಮಂದಿಯಿಂದ ಏಕಕಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳ ಅನುಷ್ಠಾನ: ಪುನರ್ವಸು 2.0 ಸಮ್ಮೇಳನದಲ್ಲಿ ದಾಖಲೆ ಸಾಧನೆ; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತಾತ್ಕಾಲಿಕ ಮಾನ್ಯತೆ

Suddi Udaya

ಸುಲ್ಕೇರಿಮೊಗ್ರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya
error: Content is protected !!