ಉಜಿರೆ: ಇಲ್ಲಿಯ ವಿದ್ಯಾನಗರ ನಿವಾಸಿ, ಕನ್ನಡ ಸಾಹಿತ್ಯ ಮತ್ತು ಇತಿಹಾಸ ಸಂಶೋಧನೆ, ಜೈನ ಧರ್ಮದ ಬಗ್ಗೆ ಆಳ ಅಧ್ಯಯನ ನಡೆಸಿದ್ದ ಎಸ್ಡಿಎಂ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕರು, ಉಜಿರೆ ಹಾಮಾನ ಸಂಶೋಧನಾ ಕೇಂದ್ರದ ನಿರ್ದೇಶಕರು, ಮಂಜೂಷ ವಸ್ತು ಸಂಗ್ರಹಾಲಯದ ರೂವಾರಿ ಡಾ. ಎಸ್.ಡಿ ಶೆಟ್ಟಿ ಉಜಿರೆ ರವರು ಜು.29ರಂದು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು.
ಮೃತರು ಪತ್ನಿ ಸುಗುಣ ಶೆಟ್ಟಿ, ಪುತ್ರಿಯರಾದ ಪ್ರಿಯಾ, ಪ್ರಗತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವು ರಾತ್ರಿ 8.00 ಗಂಟೆಗೆ ಉಜಿರೆ ನಿವಾಸಕ್ಕೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
















