ಅಳದಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ತುಳುಕೂಟ ಇಸ್ರೇಲ್ ಸಹಕಾರದಿಂದ ಅಪಘಾತದಿಂದ ಕಾಲು ಮುರಿತ್ತಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸುರೇಂದ್ರ ಬಲ್ಯಾಯಕೋಡಿ ಇವರಿಗೆ ಧನ ಸಹಾಯ ಹಸ್ತಾಂತರ ಕಾರ್ಯಕ್ರಮ ಜು. 29 ರಂದು ಅಳದಂಗಡಿ ಅರಮನೆಯಲ್ಲಿ ನಡೆಯಿತು.
ಧನಸಹಾಯ ಹಸ್ತಾಂತರ ಮಾಡಿದ ಅಳದಂಗಡಿ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮಾತನಾಡಿ ಮಂಜುಶ್ರೀ ಸೀನಿಯರ್ ಛೇಂಬರ್ ಮತ್ತು ಇಸ್ರೇಲ್ ತುಳುಕೂಟ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿರುವುದು ತಿಳಿದು ಕೊಂಡಿರುತ್ತೇನೆ ಅರ್ಹ ವ್ಯಕ್ತಿಯನ್ನು ಗುರುತಿಸಿ ಈ ಧನ ಸಹಾಯ ನೀಡಿದ್ದೀರಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜ ವಹಿಸಿದ್ದರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ ರೈ, ಕಾರ್ಯಕ್ರಮದ ಸಂಚಾಲಕ ಶುಭಾಶ್ಚಂದ್ರ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಳದಂಗಡಿ ಸತ್ಯ ದೇವತಾ ದೇವಸ್ಥಾನದ ಮೋಕ್ತೆಸರ ಶಿವಪ್ರಸಾದ್ ಅಜಿಲ, ಸೀನಿಯರ್ ಛೇಂಬರ್ ಉಪಾಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ವಿಲ್ಸನ್ ಗೊನ್ಸಾಲಿಸ್, ಕೋಶಾಧಿಕಾರಿ ಪದ್ಮ ಕುಮಾರ್, ಸದಸ್ಯರುಗಳಾದ ಅಶೋಕ್ ಶೆಟ್ಟಿ, ವಿಶ್ವನಾಥ್ ಲಾಯಿಲ, ಪ್ರಸನ್ನ ಕುಮಾರ್, ಹರೀಶ್ ಶೆಟ್ಟಿ, ಸಂತೋಷ ಹೆಗ್ಡೆ, ರಾಧಾಕೃಷ್ಣ, ಭಾನುಪ್ರಸನ್ನ, ರೋನಾಲ್ಡ್ ಲೋಬೊ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಲ್ಯಾನ್ಸಿ ಪಿರೇರಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಉಮೇಶ್ ಕುಮಾರ್ ವಂದಿಸಿದರು.
















