ಪುದುವೆಟ್ಟು : ಹಿಂದೂ ಸೇವಾ ಸಮಿತಿ ಪುದುವೆಟ್ಟು ವತಿಯಿಂದ ಶ್ರೀ ಓಂ ಶಕ್ತಿ ಭಜನಾ ಮಂದಿರ ಪುದುವೆಟ್ಟುನಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ 108 ತೆಂಗಿನಕಾಯಿ ಗಣಹೋಮ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪುದುವೆಟ್ಟು ಪಂಚಾಯತ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಗೌಡ , ಪುದುವೆಟ್ಟು ಶಕ್ತಿ ಕೇಂದ್ರ ಪ್ರಮುಖರಾದ ಪೂರ್ಣಾಕ್ಷ ಬಾಯಿತ್ಯಾರು, ಓಂ ಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ಚೇತನ್ ಮುಚ್ಚಾರು, ಮೀಯಾರು ಶ್ರೀ ವನದುರ್ಗ ದೇವಸ್ಥಾನದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಗೌಡ, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಾಸ್ಕರ ಅಡ್ಯ, ಪ್ರಮುಖರಾದ ನಿವೃತ್ತ ಪ್ರಾಂಶುಪಾಲರಾದ ಯದುಪತಿ ಗೌಡ ಡೆಚ್ಚಾರು, ಬೆನಕ ಕನ್ಸ್ಟ್ರಕ್ಷನ್ ಗಣೇಶ್ ಗೌಡ ಉಜಿರೆ, ಧರ್ಮಸ್ಥಳ ಸಿ ಎ ಬ್ಯಾಂಕ್ ನಿರ್ದೇಶಕರಾದ ಪ್ರಸನ್ನ ಹೆಬ್ಬಾರ್, ಪ್ರಮುಖರಾದ ದೇವಣ್ಣ ಗೌಡ ಬೇರಿಕೆ, ದೇವಣ್ಣ ಗೌಡ ಮುಚ್ಚಾರು, ಧನ್ಯಕುಮಾರ್ ಭಂಡಾರಿ ಪುದುವೆಟ್ಟು, ದಾಮೋದರ ಗೌಡ ಮುಜರ್ ದಡ್ದ್, ಚಂದ್ರಹಾಸ ಮುಚ್ಚಾರು ,ಶಶಿಧರ್ ಗುಂಪಕಲ್ಲು, ದಿವಾಕರ ಗೌಡ ಮುಚ್ಚಾರು, ಹರೀಶ್ ಗುಂಪಕಲ್ಲು, ಪ್ರಮೋದ್ ದರ್ಖಾಸ್, ಗಣೇಶ್ ನೆರೋಲ್ದಪಲ್ಕೆ, ಸೇವಾಪ್ರತಿನಿಧಿ ಹರಿಣಾಕ್ಷಿ ಕೇರ್ಯ, ಚೈತ್ರ ಕೇರ್ಯ ಇನ್ನಿತರ ಗಣ್ಯರು, ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.













