ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ನೇತೃತ್ವದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬದನಾಜೆ ಇಲ್ಲಿ ವನಮಹೋತ್ಸವ ಆಚರಿಸಲಾಯಿತು.
ಕಾರ್ಯ ಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಶ್ರೀಧರ ಕೆ.ವಿ, ಚೇರ್ ಮೆನ್ ಫಾರ್ “Save the environment” ರೊ. ಶರತ್ ಕೃಷ್ಣ ಪಡುವೆಟ್ನಾಯ, ರೊ.ವಿದ್ಯಾಕುಮಾರ ಕಾಂಚೋಡು, ರೊ ಸೋಮಶೇಖರ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳು ಹಸಿರು ಉಡುಪನ್ನು ಧರಿಸಿ ಈ ದಿನವನ್ನು ಹಸಿರು ದಿನವನ್ನಾಗಿ ಆಚರಿಸಿದರು. ಸಾಂಕೇತಿಕವಾಗಿ 5 ಮಕ್ಕಳಿಗೆ ವೇದಿಕೆಯಲ್ಲಿ ಗಿಡಗಳನ್ನು ವಿತರಿಸಲಾಯಿತು.













