ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಘಟಕ ಹಾಗೂ ಮಂಜುಶ್ರೀ ಭಜನಾ ಮಂದಿರ ಮಂಜುಶ್ರೀ ನಗರ ಮುಂಡಾಜೆ ಇದರ ವತಿಯಿಂದ ನಂದಗೋಕುಲ ಗೋಶಾಲೆ ಕಳೆಂಜ ಕಾಯರ್ತಡ್ಕಕ್ಕೆ ಗೋವಿಗಾಗಿ ಮೇವು ವಿಶೇಷ ಕಾರ್ಯಕ್ರಮ ಜರಗಿತು.
ಎರಡು ಟೆಂಪೋ ದಲ್ಲಿ ಹಸಿರು ಹುಲ್ಲನ್ನು ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಉಮೇಶ್ ಆಚಾರ್ಯ ಕಾನರ್ಪ, ಕಾರ್ಯದರ್ಶಿ ನಾರಾಯಣ ಶೆಟ್ಟಿ ಮಂಜುಶ್ರೀ ನಗರ, ಸದಸ್ಯರಾದ ಮಧು ಶೆಟ್ಟಿ ಹುರ್ತಜೆ, ದಿನೇಶ್ ಗೌಡ ಮಂಜುಶ್ರೀ ನಗರ, ಸದಾನಂದ ಬಿ ಮುಂಡಾಜೆ, ಶೇಖರ ಗೌಡ, ಭಜರಂಗದಳದ ಸಂಚಾಲಕರಾದ ಅನಂತ ಕುಂಟಾಳಫಲ್ಕೆ, ಮಾತೃಶಕ್ತಿ ಘಟಕದ ಪ್ರಮುಖ್ ರೇವತಿ ದಿನೇಶ್ ಆಚಾರ್ಯ, ರೋಹಿಣಿ, ಗುಲಾಬಿ ಸುಂದರ ಗೌಡ, ಸೀತಾ, ಹಾಗೂ ದುರ್ಗಾವಾಹಿನಿ ಘಟಕದ ಸಂಯೋಜಕಿ ಲೀಲಾವತಿ ಬಾಲಕೃಷ್ಣ ನಾಯ್ಕ್ , ಉಷಾ ದಿನೇಶ್ ಗೌಡ, ವಿಮಲಾ ಶೇಖರ ಗೌಡ ಭಾಗವಹಿಸಿದ್ದರು. ವಾಹನದ ವ್ಯವಸ್ಥೆಯನ್ನು ಪಂಚಶ್ರೀ ಗ್ರೂಪ್ ನಾರಾಯಣ ಗೌಡ ಕೊಳಂಬೆ, ಚೆನ್ನಕೇಶವ ನಾಯ್ಕ್ ಅರಸಮಜಲು ನಡೆಸಿದರು. ಕೃಷ್ಣ ಗೌಡ ಹುರ್ತಾಜೆ ಹುಲ್ಲನ್ನು ದಾನವಾಗಿ ನೀಡಿದರು.













