26.1 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿ.ಹಿಂ.ಪ. ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಗ್ರಾಮ ಸಮಿತಿ ವತಿಯಿಂದ ಕಳೆಂಜ ಗೋಶಾಲೆಗೆ ಗೋವಿಗಾಗಿ ಮೇವು

ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಘಟಕ ಹಾಗೂ ಮಂಜುಶ್ರೀ ಭಜನಾ ಮಂದಿರ ಮಂಜುಶ್ರೀ ನಗರ ಮುಂಡಾಜೆ ಇದರ ವತಿಯಿಂದ ನಂದಗೋಕುಲ ಗೋಶಾಲೆ ಕಳೆಂಜ ಕಾಯರ್ತಡ್ಕಕ್ಕೆ ಗೋವಿಗಾಗಿ ಮೇವು ವಿಶೇಷ ಕಾರ್ಯಕ್ರಮ ಜರಗಿತು.

ಎರಡು ಟೆಂಪೋ ದಲ್ಲಿ ಹಸಿರು ಹುಲ್ಲನ್ನು ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಉಮೇಶ್ ಆಚಾರ್ಯ ಕಾನರ್ಪ, ಕಾರ್ಯದರ್ಶಿ ನಾರಾಯಣ ಶೆಟ್ಟಿ ಮಂಜುಶ್ರೀ ನಗರ, ಸದಸ್ಯರಾದ ಮಧು ಶೆಟ್ಟಿ ಹುರ್ತಜೆ, ದಿನೇಶ್ ಗೌಡ ಮಂಜುಶ್ರೀ ನಗರ, ಸದಾನಂದ ಬಿ ಮುಂಡಾಜೆ, ಶೇಖರ ಗೌಡ, ಭಜರಂಗದಳದ ಸಂಚಾಲಕರಾದ ಅನಂತ ಕುಂಟಾಳಫಲ್ಕೆ, ಮಾತೃಶಕ್ತಿ ಘಟಕದ ಪ್ರಮುಖ್ ರೇವತಿ ದಿನೇಶ್ ಆಚಾರ್ಯ, ರೋಹಿಣಿ, ಗುಲಾಬಿ ಸುಂದರ ಗೌಡ, ಸೀತಾ, ಹಾಗೂ ದುರ್ಗಾವಾಹಿನಿ ಘಟಕದ ಸಂಯೋಜಕಿ ಲೀಲಾವತಿ ಬಾಲಕೃಷ್ಣ ನಾಯ್ಕ್ , ಉಷಾ ದಿನೇಶ್ ಗೌಡ, ವಿಮಲಾ ಶೇಖರ ಗೌಡ ಭಾಗವಹಿಸಿದ್ದರು. ವಾಹನದ ವ್ಯವಸ್ಥೆಯನ್ನು ಪಂಚಶ್ರೀ ಗ್ರೂಪ್ ನಾರಾಯಣ ಗೌಡ ಕೊಳಂಬೆ, ಚೆನ್ನಕೇಶವ ನಾಯ್ಕ್ ಅರಸಮಜಲು ನಡೆಸಿದರು. ಕೃಷ್ಣ ಗೌಡ ಹುರ್ತಾಜೆ ಹುಲ್ಲನ್ನು ದಾನವಾಗಿ ನೀಡಿದರು.

Related posts

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕನ್ಯಾಡಿ ಪುನಶ್ಚೇತನ ಕೇಂದ್ರಕ್ಕೆ ರೂ.10 ಲಕ್ಷ ಅನುದಾನ

Suddi Udaya

ಜು.13: ಗುರುವಾಯನಕೆರೆ ವಿದ್ಯುತ್ ನಿಲುಗಡೆ

Suddi Udaya

ಕೊಕ್ಕಡ ಹಳ್ಳಿಂಗೇರಿ ಎರಡು ಮನೆಗಳಿಗೆ ಮರ ಬಿದ್ದು ಹಾನಿ: ಅಪಾರ ನಷ್ಟ

Suddi Udaya

ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶ್ರೀಮತಿ ಚೈತನ್ಯ ಮತ್ತು ನಿರಂಜನ ಗೌಡ ರವರಿಂದ ವಿದ್ಯುತ್ ಚಾಲಿತ ಗಂಟೆ ಕೊಡುಗೆ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗೇರುಕಟ್ಟೆ: ಮಾಜಿ ಶಾಸಕರಾದ ವಸಂತ ಬಂಗೇರರಿಗೆ ಸಂತಾಪ ಪೂರ್ವಭಾವಿ ಸಭೆ

Suddi Udaya
error: Content is protected !!