ಬೆಳ್ತಂಗಡಿ: ಬೆಳ್ತಂಗಡಿಯ ಶಶಿಧರ್ ಕುಲಾಲ್ ರವರ ಜಾಗದಲ್ಲಿರುವ ಜಿಯೋ ಮೊಬೈಲ್ ಟವರ್ನ ಬಾಡಿಗೆ ಕಟ್ಟುವಂತೆ ಕೇಳಿದಕ್ಕೆ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಬೆಳ್ತಂಗಡಿಯಲ್ಲಿ ವಾಸವಿರುವ ಶಶಿಧರ್ ಕುಲಾಲ್ ರವರಿಗೆ ಸೇರಿದ ಜಾಗದಲ್ಲಿ KA 19AF6262 INTRA V30 ವಾಹನವನ್ನು ಜಿಯೋ ಮೊಬೈಲ್ ಟವರ್ಗೆ ತಿಂಗಳೊಂದಕ್ಕೆ 49,500/- ಬಾಡಿಗೆಗೆ ನೀಡುವಂತೆ ಒಪ್ಪಂದ ಮಾಡಲಾಗಿದ್ದು, ನವೆಂಬರ್ನ ಒಂದು ತಿಂಗಳ ರೂ.49,500 ಮೊತ್ತ ನೀಡಲು ಬಾಕಿ ಇದ್ದು, ಸದ್ರಿ ಮೊತ್ತವನ್ನು ಕೇಳಿದಾಗ ಶಶಿಧರ್ ಕುಲಾಲ್ ರವರಿಗೆ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ.
ಈ ಘಟನೆ ಕುರಿತು ಶಶಿಧರ್ ಕುಲಾಲ್ ಅವರು ನೀಡಿದ ದೂರಿನನ್ವಯ ಸುರೇಶ್ ಪೂಜಾರಿ, ಬಾಲಾಜಿ ಡಿ.ಜಿ ಇವರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.













