ಬೆಳ್ತಂಗಡಿ: ಬೆಳ್ತಂಗಡಿಯ ಪ್ರತಿಷ್ಠಿತ ಹೆರಾಜೆ ಕುಟುಂಬದ ಸದಸ್ಯರು ಮಡಿಕೇರಿಯ ಸುಂದರ ಪರಿಸರದ ವಿಸ್ಮ ರೆಸಾರ್ಟ್ನಲ್ಲಿ ಕುಟುಂಬ ಮಿಲನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.

ಸುಮಾರು 70ಕ್ಕೂ ಹೆಚ್ಚು ಹಿರಿಯ-ಕಿರಿಯ ಸದಸ್ಯರು ಭಾಗವಹಿಸಿದ ಈ ಕುಟುಂಬ ಸಮಾಗಮದಲ್ಲಿ ಭಾಗವಹಿಸಿದರು.
ಆಷಾಢ ಮಾಸದ ಮಳೆಯ ನಡುವೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಕುಟುಂಬ ಸದಸ್ಯರು ವಿವಿಧ ಮನರಂಜನಾ ಚಟುವಟಿಕೆಗಳು, ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಲ್ಲಾಸದ ಕ್ಷಣಗಳನ್ನು ಕಳೆದರು.

ಕುಟುಂಬದ ಹಿರಿಯರಾದ ಪೀತಾಂಬರ ಹೆರಾಜೆ, ಶ್ರೀಮತಿ ಸಂಗೀತ, ಶ್ರೀಮತಿ ಲೋಲಾಕ್ಷಿ, ಶೇಖರ ಬಂಗೇರ,ಜಯರಾಮ ಬಂಗೇರ, ಶ್ರೀಮತಿ ಸುಜಾತಾ, ಕೇಶವ ಪೂಜಾರಿ, ಶ್ರೀಮತಿ ಜಾನಕಿ ಕೇಶವ್, ಶ್ರೀಮತಿ ವಿಮಲಾ ಜಗನ್ನಾಥ್, ಉಮೇಶ್ ಬಂಗೇರ, ಶ್ರೀಮತಿ ಸರಿತಾ ಉಮೇಶ್ ಹಾಗೂ ಶ್ರೀಮತಿ ಲತಾ ಶಿವರಾಮ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕುಟುಂಬದ ಸದಸ್ಯರು ಒಟ್ಟಾಗಿ ಸಮಯ ಕಳೆಯುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಹೊಸ ನೆನಪುಗಳನ್ನು ಸೃಷ್ಟಿಸಿಕೊಂಡರು. ಈ ಕುಟುಂಬ ಮಿಲನವು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಗಿ ಮೂಡಿಬಂದಿತು.













