ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಬಿ. ಆಶ್ರಫ್ ನೆರಿಯ ಅವರು ಈಗಾಗಲೇ ಆಯ್ಕೆಯಾಗಿದ್ದು, ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಪ್ರವೀಣ್ ಗೌಡ ಕೊಯ್ಯೂರು, ಖಜಾಂಚಿಯಾಗಿ ರಾಜೇಶ್ ಪುದುಚೇರಿ ಇವರನ್ನು ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರುಗಳಾಗಿ ಸದಾನಂದ ಶೆಟ್ಟಿ ಮಡಪಾಡಿ, ಜಯಾನಂದ ಪಿಲಿಕಳ, ವಿನೂಶಾ ಪ್ರಕಾಶ್ ನಾಲ್ಕೂರು, ಸಂಯೋಜಕರಾಗಿ ಎಸ್.ಎ ಮಹಮ್ಮದ್ ರಾಝಿಯುದ್ದೀನ್ ಸಬರಬೈಲು, ಯೋಗೀಶ್ ಗೌಡ ಮುಂಡಾಜೆ, ನೆಲ್ಸನ್ ಲಸ್ರಾದೋ ಮಡಂತ್ಯಾರು, ಗೋಪಿನಾಥ ನಾಯಕ್ ಗುರುವಾಯನಕೆರೆ, ಜಂಟಿ ಸಂಯೋಜಕರಾಗಿ ಅಬೂಬಕ್ಕರ್ ಚಾರ್ಮಾಡಿ, ಶ್ರೀಧರ್ ಕಳೆಂಜ, ರೀನಾ ನೆರಿಯ ಇವರನ್ನು ಆಯ್ಕೆ ಮಾಡಲಾಗಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ರಾದ ವಿನಯ ಕುಮಾರ್ ಸೊರಕೆ ಯವರ ಸೂಚನೆಯಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮತ್ತು ಬ್ಲಾಕ್ ಅಧ್ಯಕ್ಷರುಗಳ ಶಿಪಾರಸ್ಸಿನಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಗ್ರಾಮೀಣ ಭಾಗದ ಅಧ್ಯಕ್ಷರಾದ ಮಹಮ್ಮದ್ ಆಲಿ ಯವರು ಆದೇಶವನ್ನು ನೀಡಿದ್ದಾರೆ.













