ಬೆಳ್ತಂಗಡಿ : ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರ ವಿಶೇಷ ಅನುದಾನದಲ್ಲಿ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ – ಓಡ್ರೊಟ್ಟು ಪರಿಶಿಷ್ಟ ಪಂಗಡದ ರಸ್ತೆ ಕಾಂಕ್ರೀಟಿಕರಣಕ್ಕೆ ಐದು ಲಕ್ಷ ರೂಪಾಯಿ ಅನುದಾನವು ದ.ಕ. ಜಿಲ್ಲಾ ಪಂಚಾಯತ್ ರಾಜ್ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ ಕೊಳ್ನಾಡು ರವರ ಶಿಫಾರಸ್ಸಿನಂತೆ ಕಳಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ರವರ ಮುತುವರ್ಜಿಯಿಂದ ಮಂಜೂರುಗೊಂಡಿದ್ದು, ರಸ್ತೆ ಕಾಮಗಾರಿ ಪ್ರಾರಂಭಿಸುವರೇ ರಸ್ತೆ ಪರಿಶೀಲನೆ ನಡೆಸಲಾಯಿತು.

ಮಾಜಿ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಹರೀಶ್ ಕುಮಾರ್, ಶ್ರೀಮತಿ ಪುಷ್ಪಾ ಸುರೇಶ್ ನಾಯ್ಕ, ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಘವ ಎಚ್, ಸ್ಥಳೀಯ ಉದ್ಯಮಿ ದಯಾರಾಜ್ ಕೆ ಪಿ , ನಿರ್ಮಿತಿ ಕೇಂದ್ರದ ಇಂಜಿನಿಯರ್, ಕಂಟ್ರಾಕ್ಟ್ ದಾರರಾದ ಡಿ ಕೆ ಅಶ್ರಫ್ ಹಾಜರಿದ್ದರು.













