August 8, 2026
ಗ್ರಾಮಾಂತರ ಸುದ್ದಿ

ಆಶಾ ಯಂಗ್ ಸ್ಟಾರ್ ಕ್ಲಬ್ ಕಾರ್ಯಕಾರಿ ಸಮಿತಿ ಸಭೆ

ಬೆಳ್ತಂಗಡಿ, ಆ. 8: ಆಶಾ ಯಂಗ್ ಸ್ಟಾರ್ ಕ್ಲಬ್ (ರಿ.) ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷ ಶ್ರೀ ಜಯರಾಮ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ. ಆ . 8ರಂದು ಆಶಾ ಯಂಗ್ ಸ್ಟಾರ್ ಕ್ಲಬ್ ನಲ್ಲಿನಡೆಯಿತು.

ಸಭೆಯಲ್ಲಿ ಕ್ಲಬ್ಬಿನ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂದಿನ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವುದರೊಂದಿಗೆ ಹೆಚ್ಚಿನ ಸದಸ್ಯರನ್ನು ಸಂಘಟನೆಯೊಂದಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು

.

ಮಳೆಗಾಲ ಮುಗಿದ ಬಳಿಕ ಕ್ಲಬ್ಬಿನ ಕಟ್ಟಡದ ಮುಂಭಾಗದಲ್ಲಿ “ಆಶಾ ಯಂಗ್ ಸ್ಟಾರ್ ಕ್ಲಬ್ (ರಿ.)” ಎಂಬ ಹೆಸರನ್ನು ಅಳವಡಿಸಲು ಹಾಗೂ ಕ್ಲಬ್ಬಿನ ನೋಂದಣಿ ಪ್ರಕ್ರಿಯೆಯನ್ನು ಕಾರ್ಯದರ್ಶಿ ಶ್ರೀ ವಿಶ್ವನಾಥ ಶೆಟ್ರು ಅವರು ಯುವಜನ ಸೇವಾ ಇಲಾಖೆಯೊಂದಿಗೆ ಸಂಪರ್ಕಿಸಿ ಪೂರ್ಣಗೊಳಿಸಲು ತೀರ್ಮಾನಿಸಲಾಯಿತು. ಮುಂದಿನ ಮಹಾಸಭೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಯಿತು.

ಒಗ್ಗಟ್ಟು, ಸ್ನೇಹ ಮತ್ತು ಸೇವೆಯ ಸಂಕಲ್ಪದೊಂದಿಗೆ ಕ್ಲಬ್ ನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸುವ ಆಶಯವನ್ನು ಸಭೆ ವ್ಯಕ್ತಪಡಿಸಿತು.

ಅಧ್ಯಕ್ಷರು: ಶ್ರೀ ಜಯರಾಮ್ ಬಂಗೇರ
ಕಾರ್ಯದರ್ಶಿ: ಶ್ರೀ ವಿಶ್ವನಾಥ ಶೆಟ್ಟಿ. ಸದಸ್ಯರಾದ ಲಕ್ಷ್ಮಣ್ ಪೂಜಾರಿ. ನಾರಾಯಣಶೆಟ್ಟಿ. ಶಿವಪ್ಪ ಬಿರ್ವಾ. ಪಾಲಕ್ಷ ಸುವರ್ಣ. ಸಂತೋಷ್ ಕುಮಾರ್. ಜೀವನ್ ಪತ್ರವೋ.
ಸಂಜೀವ ಬಿಹೆಚ್. ಮುಂತಾದವರು ಉಪಸ್ಥಿತರಿದ್ದರು.

Related posts

ಎಸ್ಐಟಿ ಸಲ್ಲಿಸಿದ ವರದಿಯ ಪ್ರತಿ ನೀಡಲು ಅರ್ಜಿ ಸಲ್ಲಿಕೆ: ಕೆಲವೊಂದು ವರದಿಯ ಪ್ರತಿ ನೀಡಲು ಕೋರ್ಟ್ ಒಪ್ಪಿಗೆ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಕ್ಕಡ ಜಾರಿಗೆತಡಿ ನಿವಾಸಿ ಮೋನಪ್ಪ ಗೌಡ ನಿಧನ

Suddi Udaya

ತೆಂಕಕಾರಂದೂರು: ನಾಗರಪಂಚಮಿಯ ಪ್ರಯುಕ್ತ ನಾಗದೇವರಿಗೆ ಪಂಚಾಮೃತ ಅಭಿಷೇಕ

Suddi Udaya

ಗರ್ಡಾಡಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದ ಯಾತ್ರಾರ್ಥಿ ಹೃದಯಾಘಾತದಿಂದ ಸಾವು

Suddi Udaya
error: Content is protected !!