ಬಳಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರೂ , ಬೆಳ್ತಂಗಡಿ ಕ್ಷೇತ್ರದ ಜನಪ್ರೀಯ ಶಾಸಕರಾಗಿರುವ ಹರೀಶ್ ಪೂಂಜಾರವರು ಇತ್ತೀಚಿಗೆ ಕರ್ನಾಟಕ ಟಿವಿ ಜನಮತದ ಆಧಾರದಲ್ಲಿ ನಡೆಸಿದ ಕರಾವಳಿಯ ಶ್ರೇಷ್ಠ ಶಾಸಕ ಗೌರವವನ್ನು ಪಡೆದಿರುವ ಸಲುವಾಗಿ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು, ಬಳಂಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಅಭಿಮಾನದ ಗೌರವಾರ್ಪಣೆಯನ್ನು ಶಾಸಕರ ಗೃಹ ಮಿಥಿಲದಲ್ಲಿ ಆ.9 ರಂದು ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶೀತಲ್ ಪಡಿವಾಳ್ ಬಳೆಂಜ ಗುತ್ತು, ಚಂದ್ರಶೇಖರ್ ಪಿಕೆ , ಕುಳೆಂಜಿರೋಡಿ ಗುತ್ತು ಅರುಣ ಹೆಗ್ಗಡೆ, ಸತೀಶ್ ರೈ ಬಾರ್ದಡ್ಕ , ಸುರೇಶ ಶೆಟ್ಟಿ ಕುರೆಲ್ಯ, ದಿನೇಶ್ ಪಿಕೆ , ದೇಜಪ್ಪ ಪೂಜಾರಿ, ಪ್ರಭಾಕರ್ ಹೆಗ್ಡೆ ಕೊಡಿ , ಗುರುಪ್ರಸಾದ್ ಹೆಗ್ಡೆ, ಸುರೇಶ ಹೇವ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಬಳಂಜ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕ್ಷಣಗಳನ್ನು ನೆನಪಿಸಿ ದೇವಳದ ಮತ್ತು ಬಳಂಜ ಗ್ರಾಮದ ಸಮಸ್ತ ಅಭಿವೃದ್ಧಿಗೆ ಸದಾ ಜತೆಯಾಗಿರುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು. ಚಂದ್ರಶೇಖರ್ ಪಿಕೆ ಗ್ರಾಮಸ್ಥರ ಪರವಾಗಿ ಅಭಿನಂದನಾ ನುಡಿಗಳನ್ನಾಡಿದರು.













