ಕಳೆಂಜ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಗ್ರಾಮ ಸಮಿತಿ ಕಾಯರ್ತಡ್ಕ ವತಿಯಿಂದ ಆ.14 ರಂದು ಸಂಜೆ 7 ಗಂಟೆಗೆ ನಡೆಯುವ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಜನಾರ್ಧನ ಕಲ್ಕಟ್ಟ, ಅಶೋಕ್ ಅಶ್ವತಡಿ, ಗಣೇಶ್ ಕಳೆಂಜ, ಚಂದ್ರ ಗಾಳಿತೋಟ, ಧನಂಜಯ ಗೌಡ ಕಳೆಂಜ , ಇತರರು ಉಪಸ್ಥಿತರಿದ್ದರು.













