ಬೆಳ್ತಂಗಡಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ.10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಉಪಾಧ್ಯಕ್ಷ ವೆಂಕಟೇಶ್ ಬೆಳಾಲು, ಧರ್ಮಸ್ಥಳ ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ , ಬಜರಂಗದಳ ಪುತ್ತೂರು ಜಿಲ್ಲೆ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ , ಮನೀಷ್ ಉಜಿರೆ ವಿ.ಹಿಂ.ಪ ಬಜರಂಗದಳ ಬಲೋಪಾಸನಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ ,ವಿಶ್ವ ಹಿಂದೂ ಪರಿಷದ್ ಉಜಿರೆ ಘಟಕ ಉಪಾಧ್ಯಕ್ಷ ಪ್ರಸಾದ್ ಉಜಿರೆ , ಬಜರಂಗದಳ ಗೋರಕ್ಷಾ ಪ್ರಮುಖ್ ಹೇಮಂತ್ ಉಜಿರೆ, ರಾಜಕುಮಾರ್ ಉಜಿರೆ ದೇವಸ್ಥಾನ ಮೇನೇಜರ್ ಹಾಗೂ ಧರೆಶ್ ಉಜಿರೆ ಉಪಸ್ಥಿತರಿದ್ದರು.













