ಬಂದಾರು: ಬಂದಾರಿನಲ್ಲಿ ಕೆಲ ದಿನಗಳಿಂದ ಕಾಡಾನೆಯು ತಿರುಗಾಡುತ್ತಿದ್ದು ತೋಟಕ್ಕೆ ನುಗ್ಗಿ ಅಪಾರ ಬೆಳೆ ನಾಶಪಡಿಸಿವೆ.
ಆ.10 ರಂದು ದಲಜೆಯ ವಾಸಪ್ಪ ಗೌಡರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆಗಿಡಗಳು ಹಾಗೂ ಅಡಕೆ ಸಸಿಗಳನ್ನು ಹಾನಿಗೊಳಿಸಿವೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ತೋಟ ಗಳಿಗೆ ನಿರಂತರವಾಗಿ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.













