ಬೆಳ್ತಂಗಡಿ : ಮಾಳವ ಯಾನೆ ಮಲ್ಲವರ ಸಮಜಾಭ್ಯುಧಯ ಸಂಘ ( ರಿ) ಬೆಳ್ತಂಗಡಿ ಇದರ ಸಹಕಾರದೊಂದಿಗೆ ಮಾಳವ ಯಾನೆ ಮಲ್ಲವರ ಯುವಕ ಸಂಘ ಬೆಳ್ತಂಗಡಿ ಮತ್ತು ಮಹಿಳಾ ಸಂಘ ಬೆಳ್ತಂಗಡಿ ಇದರ ವತಿಯಿಂದ ನಡೆದ ಪ್ರಥಮ ವರ್ಷದ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಯ ಅಲ್ಲಾಟಬೈಲು ಎಂಬಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜದ ಹಿರಿಯರು ಲಿಂಗಪ್ಪ ಹೆಗ್ಡೆ ನೆರವೇರಿಸಿದರು. ನಂತರದಲ್ಲಿ ಗದ್ದೆಗೆ ಹಾಲು ಒಯ್ಯುವುದರಿಂದ ಆಟೋಟ ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು. ಸಂಜೆ ಸಮರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶಂಕರ್ ಬೆಳ್ತಂಗಡಿ ಅಧ್ಯಕ್ಷರು ಮಾಳವ ಯಾನೆ ಮಲ್ಲವರ ಸಮಜಾಭ್ಯುಧಯ ಸಂಘ ಬೆಳ್ತಂಗಡಿ ವಹಿಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ನಿತ್ಯಾನಂದ ಮಾಲಾಡಿ ಮತ್ತು ಕುಶಾಲ ಮಾಧವ ಹಾಗೂ ಮಾಳವ ಯಾನೆ ಮಲ್ಲವರ ಯುವಕ ಸಂಘದ ಅಧ್ಯಕ್ಷ ಮೋಹನ್ ಬೆಳ್ತಂಗಡಿ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಸತೀಶ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ರವರನ್ನು ಮಾಳವ ಯಾನೆ ಮಲ್ಲವರ ಯುವಕ ಸಂಘ ದಿಂದ ಗೌರವಿಸಲಾಯಿತು. ಮತ್ತು ಅಲ್ಲಾಟಬೈಲು ಈ ಭಾಗಕ್ಕೆ ಶಾಸಕರಿಂದ ವಿಶೇಷ ಅನುದಾನದಲ್ಲಿ ಸಂಪರ್ಕ ರಸ್ತೆಯನ್ನು ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಊರಿನ ಸಮಸ್ತರಿಂದ ಶಾಸಕರನ್ನು ಗೌರವಿಸಲಾಯಿತು.
ಮಾಳವ ಯಾನೆ ಮಲ್ಲವರ ಯುವಕ ಸಂಘ ಅಧ್ಯಕ್ಷ ಮೋಹನ್ ಬೆಳ್ತಂಗಡಿ ಸ್ವಾಗತಿಸಿ, ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ವಿನಿ ದಿನೇಶ್ ಧನ್ಯವಾದವಿತ್ತರು. ಮಾಳವ ಯಾನೆ ಮಲ್ಲವರ ಸಮಜಾಭ್ಯುಧಯ ಸಂಘ ಪ್ರಧಾನ ಕಾರ್ಯದರ್ಶಿ ಸತೀಶ್ ರಾಜ್ ಕಾರ್ಯಕ್ರಮ ನಿರೂಪಿಸಿದರು.













