ಬೆಳ್ತಂಗಡಿ: ಕರ್ನಾಟಕ ಟಿವಿ ಮಾಧ್ಯಮ ಪ್ರಾಯೋಜಿತ “ಬೆಸ್ಟ್ ಲೀಡರ್ ಅವಾರ್ಡ್ ” ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜಾ ಅವರನ್ನು ಟೀಮ್ ದಕ್ಷಿಣ ಕಾಶಿ ಉಪ್ಪಿನಂಗಡಿಯ ಪರವಾಗಿ ಗೌರವಿಸಿ, ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಟೀಮ್ ದಕ್ಷಿಣಕಾಶಿಯ ನೂತನ ಅಧ್ಯಕ್ಷ ವಿಧ್ಯಾಧರ ಜೈನ್, ಗೌರವ ಅಧ್ಯಕ್ಷ ರವಿ ಇಳಂತಿಲ, ಉಪಾಧ್ಯಕ್ಷರಾದ ತಿಮ್ಮಪ್ಪ ಇಳಂತಿಲ, ಮಾಜಿ ಅಧ್ಯಕ್ಷ ರಾದ ಪ್ರಸನ್ನ ಪೆರಿಯಡ್ಕ, ಸದಸ್ಯರಾದ ಸುನೀಲ್ ಕುಮಾರ್ ಅಣಾವು, ಲಕ್ಷ್ಮೀಶ್ ಪಾಡೆಂಕಿ, ಗಿರೀಶ್ ಇಳಂತಿಲ ಉಪಸ್ಥಿತರಿದ್ದರು.













