ನಿಡ್ಲೆ: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಬರೆಂಗಾಯ ಪ್ರಯುಕ್ತ ಸೆ. 5 ರಂದು ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ವನಸಾಯ ವನದುರ್ಗಾ ಅಮ್ಮನವರ ಸನ್ನಿಧಾನದಲ್ಲಿ ಆ.11 ರಂದು ಸಮಿತಿಯ ಅಧ್ಯಕ್ಷ ಸುಬ್ಬರತ್ನ ಗೌಡ ಕಳ್ಳಿಮಾರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬರೆಂಗಾಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ, ನಿಸರ್ಗ ಸಂಘಟನೆಯ ಅಧ್ಯಕ್ಷ ಪುನೀತ್ ಪೊಂರ್ದಿಲ, ನಿಸರ್ಗ ಕ್ಷೇಮನಿಧಿ ಯೋಜನೆಯ ಅಧ್ಯಕ್ಷ ತಿಮ್ಮಪ್ಪ ಗೌಡ ಅಂತರ, ನಿಡ್ಲೆ ಸಿ.ಎ ಬ್ಯಾಂಕಿನ ನಿರ್ದೇಶಕರಾದ ಆನಂದ ಗೌಡ ಎಂಜಿರ್ , ಸಮಿತಿಯ ಗೌರವ ಸಲಹೆಗಾರ ನಾಗೇಶ್ ಗೌಡ ಅತ್ಯರಂಡ, ಸಮಿತಿಯ ಉಪಾಧ್ಯಕ್ಷ ಧನಂಜಯ ಗೌಡ ಉಪಸ್ಥಿತರಿದ್ದರು.













