25.1 C
ಪುತ್ತೂರು, ಬೆಳ್ತಂಗಡಿ
August 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಕೀಲರ ಭವನದಲ್ಲಿ “ಆಟಿದ ನೆಂಪು” ವಿಶೇಷ ಕಾರ್ಯಕ್ರಮ: ಮನಸೆಳೆದ 8 ವರ್ಷದ ಪೋರನ ಆಟಿ ಕಳೆಂಜ ವೇಷ

ಬೆಳ್ತಂಗಡಿ: ವಕೀಲರ ಸಂಘ (ರಿ) ಬೆಳ್ತಂಗಡಿ ವತಿಯಿಂದ ತುಳುನಾಡ ಸಂಸ್ಕಾರ, ಸಂಸ್ಕೃತಿ, ಕೃಷಿ ಕಾಯಕ, ಜನರ ಆಚಾರ-ವಿಚಾರ, ಆಹಾರ ಪದ್ಧತಿಯ ವೈಶಿಷ್ಟ್ಯಗಳನ್ನು ಪುನರಪಿ ನೆನಪಿಸುವ “ಆಟಿದ ನೆಂಪು” ಕಾರ್ಯಕ್ರಮ ಆ.13ರಂದು ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಮುನ್ನ ವೇದಿಕೆಯಲ್ಲಿ ಮಾಲಾಡಿ ಶಶಿಧರ್ ಮತ್ತು ತಂಡದಿಂದ ಆಟಿ ಕಳೆಂಜ ಪ್ರದರ್ಶನ ನಡೆಯಿತು. ಎಂಟು ವರ್ಷದ ಬಾಲಕ ಸಿರಿನ್ ರವರ ಆಟಿ ಕಳೆಂಜ ವೇಷ ಎಲ್ಲಾ ವಕೀಲರುಗಳ ಮನ ಸೆಳೆಯಿತು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ.ಎಫ್.ಸಿ, ಮನು ಬಿ.ಕೆ. ಅವರು ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ವಕೀಲರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೊ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಮ ಲಿಂಗಪ್ಪ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ.ಎಫ್.ಸಿ, ಬೆಳ್ತಂಗಡಿ, ಶಶಾಂಕ್ ನಾಗೇಂದ್ರ ಭಟ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ಬೆಳ್ತಂಗಡಿ, ಶಿವಕುಮಾ‌ರ್ ಎಸ್.ಎಮ್. ಅಧ್ಯಕ್ಷರು, ಹಿರಿಯ ಸಮಿತಿ ವಕೀಲರ ಸಂಘ ಬೆಳ್ತಂಗಡಿ, ಶ್ರೀನಿವಾಸ ಗೌಡ ಉಪಾಧ್ಯಕ್ಷರು, ವಕೀಲರ ಸಂಘ ಬೆಳ್ತಂಗಡಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ, ಉಜಿರೆ ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ. ಮಹಾವೀರ ಜೈನ್ ಅವರು ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು.

ವಿಶೇಷ ಆಕರ್ಷಣೆ : ವಿವಿಧ ಬಗೆಯ ಆಟಿಯ ತಿಂಡಿ ತಿನಸುಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಸ್ವಾಗತಿಸಿ, ಖಜಾಂಜಿ ಮುಲ್ತಾಜ್ ಬೇಗಂ ವಂದಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ವಸಂತ ಮರಕಡ, ಹರ್ಷಿತ್ ಕುಮಾರ್ ಹೆಚ್ ಕಾರ್ಯಕ್ರಮ ನಿರೂಪಿಸಿದರು.

Related posts

ಅರಸಿನಮಕ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಬಳಂಜ: ನಮ್ಮ ಮಣ್ಣು ನಮ್ಮ ದೇಶ ಧ್ಯೇಯದೊಂದಿಗೆ ದೆಹಲಿಯಲ್ಲಿ ನಿರ್ಮಾಣಗೊಳ್ಳುವ ಹುತಾತ್ಮರ ಸ್ಮಾರಕಕ್ಕೆ ಬಳಂಜ ಗ್ರಾ.ಪಂ ಮುಖೇನಾ ಮಣ್ಣು ಹಸ್ತಾಂತರ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕೆನರಾ ಬ್ಯಾಂಕಿನ ಡಿಜಿಎಮ್ , ಮಂಗಳೂರು ರೀಜಿನಲ್ ಮೆನೇಜರ್ ಹಾಗೂ ರುಡ್ ಸೆಟ್ ಅಧಿಕಾರಿಗಳು ಭೇಟಿ: ದೇವರಿಗೆ ರಂಗಪೂಜೆ ಸೇವೆ

Suddi Udaya

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya

ಧರ್ಮಸ್ಥಳ: ಅಕ್ರಮ ಕೂಟ ಸೇರಿ ಗಲಾಟೆ ಪ್ರಕರಣ6 ಜನರ ಬಂಧನ: ಜಮೀನು ಮಂಜೂರು

Suddi Udaya

ಚಾರ್ಮಾಡಿ: ಪ್ರಯಾಣಿಕರ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಢಿಕ್ಕಿ: ಸಾಗರದ ವಿನೋದ್‌ರಿಗೆ ಗಂಭೀರ ಗಾಯ

Suddi Udaya
error: Content is protected !!