ಶಿಬಾಜೆ : ಇಲ್ಲಿಯ ಬೂಡ್ದಮಕ್ಕಿ ಚೆನ್ನಪ್ಪ ಎಂಬವರ ಮನೆಯ ಕೋಣೆಯ ಕಪಾಟಿನ ಕೆಳಗೆ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾದ ಘಟನೆ ಆ.13 ರಂದು ಸಂಜೆ ನಡೆದಿದೆ.
ಕೇರೆ ಹಾವೊಂದನ್ನು ಅಟ್ಟಿಸಿಕೊಂಡು ಬಂದ ಕಾಳಿಂಗ ಮನೆಯೊಳಗೆ ಬಂದು ಮನೆಯವರನ್ನು ಕಂಡು ಗಾಬರಿಯಾಗಿ ಕಪಾಟಿನಡಿಯಲ್ಲಿ ಹೋಗಿ ಸೇರಿಕೊಂಡಿದೆ. ಭಯಗೊಂಡ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಕಳೆಂಜ ಶಾಖಾ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಗಸ್ತುಅರಣ್ಯ ಪಾಲಕ ಉಮೇಶ್ ಎಂ.ಇವರ ಸೂಚನೆಯಂತೆ ಸ್ಥಳೀಯ ಉರಗರಕ್ಷಕ ರಮೇಶ್ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ರಕ್ಷಿಸಿ ಸ್ಥಳೀಯ ಕಾಡಿನಲ್ಲಿ ಬಿಟ್ಟರು .













