ಬೆಳ್ತಂಗಡಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಾಲ್ಕೂರು ಸಮಿತಿಯ ಸಮಾಲೋಚನಾ ಸಭೆಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಆ 13ರಂದು ನಡೆಯಿತು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿರವರು ಕಸ್ತೂರಿ ರಂಗನ್ ವರದಿ ಮತ್ತು 7 ನೇ ಕರಡು ಅಧಿಸೂಚನೆಯ ಪರಿಸರ ಸೂಕ್ಷ್ಮ ವಲಯ ಯೋಜನೆಯಿಂದ ಎದುರಗುವ ಸಮಸ್ಯೆಗಳು ಮತ್ತು ಬೇಡಿಕೆಯನ್ನು ಕಾರ್ಯಕರ್ತರಿಗೆ ತಿಳಿಸಿದರು. ವೈಯಕ್ತಿಕ ಮತ್ತು ಸಂಘ ಸಂಸ್ಥೆ ಗಳ ಮೂಲಕ ಗ್ರಾಮ ಪಂಚಾಯತ್ ಗಳಿಗೆ ಆಕ್ಷೇಪನೆಪತ್ರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು . ಆ. 20 ರಂದು ಹೋರಾಟದ ರೂಪುರೆಷೆಯ ಸಭೆ ಸುಬ್ರಮಣ್ಯದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪ್ರಮುಖರಾದ ದಾಮೋಧರ್ ಗುಂಡ್ಯ, ಮಿಲನ್ ಬಾಳಿಕಳ, ಮಾಧವ ಶಿರ್ಲಾಲು, ಉಮೇಶ್ ಸುವರ್ಣ, ರವಿ ಪೂಜಾರಿ ಸುಲ್ಕೇರಿ ಹಾಗೂ ನಾಲ್ಕೂರಿನ ಗ್ರಾಮಸ್ಥರು, ಮತ್ತು ಜಿಲ್ಲಾ ಪ್ರಮುಖರು, ರೈತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ರಚಿಸಲಾಗಿದ್ದು ಸಂಚಾಲಕರಾಗಿ ಕರುಣಾಕರ ಹೆಗ್ಡೆ, ಉಪ ಸಂಚಾಲಕರಾಗಿ ದಿನೇಶ್ ಪಿಕೆ ಮತ್ತು ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.













