ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸದಾನಂದ ಮುಂಡಾಜೆ, ನಿವೃತ್ತ ಎಸ್.ಡಿ.ಎಂ ಕಾಲೇಜಿನ ಸಿಬ್ಬಂದಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಳಸಕ್ಕೆ ಅಕ್ಕಿಹಾಕಿ ಹಿಂಗಾರವನ್ನು ಬಿಡಿಸಿ ದೀಪ ಬೆಳಗಿಸಿ ಚೆನ್ನಮನೆ ಆಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ವಿಶೇಷತೆಯ ಬಗ್ಗೆ ಮಾತನಾಡಿದರು. ಹಿರಿಯರು ಮಾಡಿಕೊಂಡು ಬಂದ ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಹಿರಿಯರ ಕಾಲದಲ್ಲಿ ಆಟಿ ತಿಂಗಳ ಎಂದರೆ ಅದು ಕಷ್ಟದ ಸಮಯ., ರೋಗರುಜಿನಗಳನ್ನು ಹೊಡೆದೋಡಿಸಲು ಮನೆ ಮನೆಗೆ ಆಟಿಕಲೆಂಜ ಬರುತ್ತಾನೆ ಎಂದು ಹೇಳಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಇವರು ಆಟಿ ವಿಶೇಷತೆ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ನಾಯ್ಕ್ ಆಟಿ ತಿಂಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಆಟಿ ತಿಂಗಳ ಪರಿಕರಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಯು ಆಟಿ ಕಲೆಂಜದ ಪ್ರದರ್ಶನ ಮಾಡಿದರು.. ಸುಮಾರು 20 ಬಗೆಯ ಆಟಿ ತಿಂಗಳ ಸಾಂಪ್ರದಾಯಿಕ ತಿಂಡಿಗಳನ್ನು ಮಕ್ಕಳಿಗೆ ಮತ್ತು ಬಂದವರಿಗೆ ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಕೂಸಪ್ಪ , ಶಿಕ್ಷಕಿಯಾದ ಜ್ಯೋತಿವರು ಸ್ವಾಗತಿಸಿದರು. ಶಿಕ್ಷಕಿ ಸುಜಾತ ಧನ್ಯವಾದ ಮಾಡಿದರು.












