August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ತ್ಯಾಗ, ಬಲಿದಾನ ಗಳ ಫಲವಾಗಿ ಸಮ್ಮ ಹಿರಿಯರ ನಡಿಗೆಯಿಂದಾಗಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂಬುದಾಗಿಸುಂದರ ಪೂಜಾರಿ, ನಿವೃತ್ತ ಜಂಟಿ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಇಲಾಖೆ,ಯವರು ಕರ್ನಾಟಕ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ಯವರೇ ವತಿಯಿಂದ ಸ್ವಂತ ಕಟ್ಟಡ ‘ಪ್ರಬುದ್ಧ’ ದಲ್ಲಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ತೆರೆಸಾ ಮಿರಾಂಡ. ಹಿರಿಯ ಸದಸ್ಯರು, ಮಾಜಿ ನಗರಸಭಾ ಅಧ್ಯಕ್ಷರು ಶುಭಾಶಯದ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಧ್ವಜಸ್ತಂಭ ಹಾಗೂ ತಿರಂಗವನ್ನು ನಾವೂರು ನಿವೃತ್ತ ಮುಖ್ಯ ಶಿಕ್ಷಕ ಎನ್. ಬಾಲಕೃಷ್ಣ ಶೆಟ್ಟಿ ಕೊಡುಗೆಯಾಗಿ ನೀಡಿದರು. ಸಿಹಿತಿಂಡಿ ವಿತರಿಸಿದ ತೆರೇಸಾ ಮಿರಾಂಡ ಹಾಗೂ ಆಗಮಿಸಿದ ಸರ್ವರಿಗೂ ಅಧ್ಯಕ್ಷ ವಿಠ್ಠಲ ಶೆಟ್ಟಿ ಧನ್ಯವಾದ ಅರ್ಪಿಸಿದರು.

ಕಾರ್ಯದರ್ಶಿ ಶ್ರೀ ವಿಶ್ವಾಸ್ ರಾವ್, ಕೋಶಾಧಿಕಾರಿ ಶ್ರೀ ಜಗನ್ನಿವಾಸ ರಾವ್, ಉಪಾಧ್ಯಕ್ಷೆ ಶ್ರೀಮತಿ ಕುಸುಮಾವತಿ ಸದಸ್ಯರಾದ ಶ್ರೀ ಆನಂದ ಶೆಟ್ಟಿ, ಶ್ರೀ ಪದ್ಮಕುಮಾರ್, ಶ್ರೀ ಶಂಭು ಶರ್ಮಾ, ಶ್ರೀ ಅಣ್ಣಿ ಗೌಡ ಪುಷ್ಪಗಿರಿ, ಶ್ರೀ ಮಂಜಪ್ಪ ಸಪಲ್ಯ ಶ್ರೀ ಸುರೇಂದ್ರ ಬಂಗೇರ ಮುಂತಾದವರು ಉಪಸ್ಥಿತರಿದ್ದರು.

Related posts

ಮದ್ದಡ್ಕ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರಾಜ್ಯಮಟ್ಟದ ಕರಾಟೆ: ಕಾಯರ್ತಡ್ಕ ದಿವ್ಯಜ್ಯೋತಿ ಆಂ.ಮಾ. ಶಾಲೆಯ ಅಡ್ಲಿನ್ ಎಲಿಜಬೆತ್ ಜೆರಿನ್ ಗೆ ಚಿನ್ನದ ಪದಕ

Suddi Udaya

ರಾಜ್ಯಮಟ್ಟದ ಜನಪದ ಗೀತಗಾಯನ ಸ್ಪರ್ಧೆ :ವಾಣಿ ಪ.ಪೂ. ಕಾಲೇಜಿನ ರೋವರ್ಸ್- ರೇಂಜರ್ಸ್ ತಂಡ ಪ್ರಥಮ ಸ್ಥಾನ

Suddi Udaya

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya

ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಉದ್ಘಾಟನೆ

Suddi Udaya

ಸುಲ್ಕೇರಿಮೊಗ್ರು: ಕಲ್ಯಾಣಬೆಟ್ಟು ನಿವಾಸಿ ಸುಂದರಿ ನಿಧನ

Suddi Udaya
error: Content is protected !!