August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪಟ್ರಮೆ: ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಪಟ್ರಮೆಯ ದಲಿತ ಹಕ್ಕು ಸಮಿತಿ ಕಚೇರಿ ಅಂಬೆಡ್ಕರ್ ಭವನದ ಆವರಣದಲ್ಲಿ ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಹಿರಿಯರಾದ ಮಾಯಿಲ ನೆಕ್ಕರೆ ಧ್ವಜಾರೋಹಣಗೈದು, ಮಾತನಾಡಿ ಬ್ರಿಟೀಷರ ದಬ್ಬಾಳಿಕೆಗಳ ವಿರುದ್ದ ಸೆಟೆದು ನಿಂತು ಸುಂದರ ಸಮೃದ್ದಿಯ ಸಮತೆಯ ಭಾರತದ ಕನಸು ಹೊತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯರು, ನಾಯಕತ್ವವಹಿಸಿದ ಗಾಂಧೀಜಿ, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಅಂಬೇಡ್ಕರ್ , ನೆಹರೂ ಮೊದಲಾದವರು ಕಂಡ ಭಾರತ ನಿರ್ಮಾಣದತ್ತ ನಾವು ಮುನ್ನಡೆಯಬೇಕಿದೆ. ಇದಕ್ಕಾಗಿ ಡಾ ಬಿ ಆರ್ ಅಂಬೆಡ್ಕರ್ ಒದಗಿಸಿಕೊಟ್ಟ ಶ್ರೇಷ್ಟ ಸಂವಿಧಾನದ ಪ್ರಕಾರ ನಾವೆಲ್ಲರೂ ಬದುಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಹಾಗೂ ಕಾರ್ಮಿಕ ಮುಖಂಡರಾದ ಬಿ.ಯಂ. ಭಟ್, ಧನಂಜಯ, ಜಯಂತ, ವಿಶಾಲು, ರೋಹಿತ್ ನೆಕ್ಕರೆ, ಉಮೇಶ್ ಪಟ್ಟೂರು, ದೀಕ್ಷಿತ್ ಪಟ್ಟೂರು, ರೋಹಿತ್ ಪಟ್ಟೂರು, ಶ್ಯಾಮರಾಜ್, ಹಾರಿಸ್ ಪಟ್ರಮೆ,ವಿನುಶರಮಣ, ಷರೀಫ್, ಚೋಮ ಮೊದಲಾದವರು ಉಪಸ್ಥಿತರಿದ್ದರು. ವಸಂತ ಟೈಲರ್ ಸ್ವಾಗತಿಸಿ, ವಂದಿಸಿದರು.

Related posts

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya

ಧರ್ಮಸ್ಥಳ ಪ್ರಕರಣ : ಸ್ವಾಮೀಜಿಗಳ ನಿಯೋಗದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಭೇಟಿ, ಎನ್ಐಎ ತನಿಖೆಗೆ ವಹಿಸುವಂತೆ ಮನವಿ

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ “ಸ್ವಭಾವವನ್ನು ಬೆಳೆಸಿ, ಭವಿಷ್ಯವನ್ನು ರೂಪಿಸೋಣ” ವಿಶೇಷ ಕಾರ್ಯಕ್ರಮ

Suddi Udaya

ಒಕ್ಕಲಿಗರ ಕ್ರಿಕೆಟ್ ಪಂದ್ಯಾಟ: ಪಟ್ರಮೆ ಬ್ರದರ್ಸ್ ತಂಡ ದ್ವಿತೀಯ ಸ್ಥಾನ

Suddi Udaya

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಓಣಂ ಮತ್ತು ಕೌಶಲ್ಯಕಲಾ ಕೇಂದ್ರದ ಶಿಕ್ಷಕಿಯರಿಗೆ ಗೌರವ ಕಾರ್ಯಕ್ರಮ

Suddi Udaya

ಮಾಲಾಡಿಯಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ

Suddi Udaya
error: Content is protected !!