ಪಟ್ರಮೆಯ ದಲಿತ ಹಕ್ಕು ಸಮಿತಿ ಕಚೇರಿ ಅಂಬೆಡ್ಕರ್ ಭವನದ ಆವರಣದಲ್ಲಿ ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಹಿರಿಯರಾದ ಮಾಯಿಲ ನೆಕ್ಕರೆ ಧ್ವಜಾರೋಹಣಗೈದು, ಮಾತನಾಡಿ ಬ್ರಿಟೀಷರ ದಬ್ಬಾಳಿಕೆಗಳ ವಿರುದ್ದ ಸೆಟೆದು ನಿಂತು ಸುಂದರ ಸಮೃದ್ದಿಯ ಸಮತೆಯ ಭಾರತದ ಕನಸು ಹೊತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯರು, ನಾಯಕತ್ವವಹಿಸಿದ ಗಾಂಧೀಜಿ, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಅಂಬೇಡ್ಕರ್ , ನೆಹರೂ ಮೊದಲಾದವರು ಕಂಡ ಭಾರತ ನಿರ್ಮಾಣದತ್ತ ನಾವು ಮುನ್ನಡೆಯಬೇಕಿದೆ. ಇದಕ್ಕಾಗಿ ಡಾ ಬಿ ಆರ್ ಅಂಬೆಡ್ಕರ್ ಒದಗಿಸಿಕೊಟ್ಟ ಶ್ರೇಷ್ಟ ಸಂವಿಧಾನದ ಪ್ರಕಾರ ನಾವೆಲ್ಲರೂ ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಹಾಗೂ ಕಾರ್ಮಿಕ ಮುಖಂಡರಾದ ಬಿ.ಯಂ. ಭಟ್, ಧನಂಜಯ, ಜಯಂತ, ವಿಶಾಲು, ರೋಹಿತ್ ನೆಕ್ಕರೆ, ಉಮೇಶ್ ಪಟ್ಟೂರು, ದೀಕ್ಷಿತ್ ಪಟ್ಟೂರು, ರೋಹಿತ್ ಪಟ್ಟೂರು, ಶ್ಯಾಮರಾಜ್, ಹಾರಿಸ್ ಪಟ್ರಮೆ,ವಿನುಶರಮಣ, ಷರೀಫ್, ಚೋಮ ಮೊದಲಾದವರು ಉಪಸ್ಥಿತರಿದ್ದರು. ವಸಂತ ಟೈಲರ್ ಸ್ವಾಗತಿಸಿ, ವಂದಿಸಿದರು.












