
ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ ಉಜಿರೆ, ಹಾಗೂ ಬೆ. ತಾ ಶ್ರೀ ಮೊಗೇರ ಸಮಾಜ ಸೇವಾ ಸಮಿತಿ(ರಿ) ಎರ್ನೋಡಿ ಉಜಿರೆ ಇದರ ವತಿಯಿಂದ 80 ನೇ ವರ್ಷದ ಸ್ವಾತಂತ್ರೋತ್ಸವ ವನ್ನು ನೆರವೇರಿಸಲಾಯಿತು
ಕ್ಷೇತ್ರದ ಟ್ರಸ್ಟಿ ಯವರಾದ ಕೆ.ಸಂಜೀವ ಶೆಟ್ಟಿ ಕುಂಟಿನಿ ಇವರು ಧ್ವಜಾರೋಹಣ ವನ್ನು ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರಾದ ಯು.ಬಾಬು ಮೊಗೇರ ಎರ್ನೋಡಿ ಇವರು ಪ್ರಸ್ತಾವಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ದ ಟ್ರಸ್ಟೀ ಉಪಾಧ್ಯಕ್ಷರಾದ ಕೆ.ಜಯಂತ ಶೆಟ್ಟಿ ಕುಂಟಿನಿ, ಪೂವಯ್ಯ ಗೌಡ ಕೇನೆರಾ, ವಿಶ್ವನಾಥ ಶೆಟ್ಟಿ ರಸರಾಗ, ಬಿ. ಕೆ ಗೋವಿಂದ ಮುಂಡಾಜೆ, ಹಾಗೂ ಸದಸ್ಯರುಗಳಾದ ತನಿಯಪ್ಪ ಅರಿಪ್ಪಾಡಿ, ಟಿ ಬಾಬು ತುಂಬೆದೊ ಟ್ಟು,ಅನಿಲ್ ರಾಜ್, ಪ್ರದೀಪ್ ಎರ್ನೋಡಿ, ದಿಲೀಪ್ ಎರ್ನೋಡಿ, ದೀಕ್ಷಿತ್ ಎರ್ನೋಡಿ, ಶಮಿತ್ ಎರ್ನೋಡಿ ಇನ್ನಿತರು ಉಪಸ್ತಿತರಿದ್ದರು












