August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ಲವರ್ ಡೆಕೋರೆಟರ್ಸ್ ಮಾಲಕರ ಸಂಘ ಬೆಳ್ತಂಗಡಿ ವಲಯದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಪ್ಲವರ್ ಡೆಕೋರೆಟರ್ಸ್ ಮಾಲಕರ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಬೆಳ್ತಂಗಡಿಯ ಸಿವಿಸಿ ಹಾಲ್ ನಲ್ಲಿ ಪ್ರಥಮ ವರ್ಷ ಆಚರಿಸಲಾಯಿತು. ದ್ವಜಾರೋಹಣವನ್ನು ನಿವೃತ್ತ ಯೋಧ ದಯಾನಂದ ಬೆಳ್ತಂಗಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿವಿಸಿ ಹಾಲ್ ಮಾಲಕ ಜೇಮ್ಸ್ ಡಿಸೋಜಾ, ಜಗತ್ ಡಿಸೋಜಾ, ಎಲಿಯಂ ಡಿಕುನ್ಹ ಪಾಂಡವರಲ್ಲು, ಬೆಳ್ತಂಗಡಿ ವಲಯ ಅಧ್ಯಕ್ಷ ಸೀತಾರಾಮ್ ಆರ್, ಉಪಾಧ್ಯಕ್ಷ ಸುರೇಂದ್ರ ಕುಡ್ವ ಉಜಿರೆ, ಕಾರ್ಯದರ್ಶಿ ವಿಕ್ರಮ್ ಧರ್ಮಸ್ಥಳ,ಸಂಘಟನಾ ಕಾರ್ಯದರ್ಶಿ ಶಶಿಕಾಂತ್ ಬೆಳ್ತಂಗಡಿ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

ಧ್ವಜಾರೋಹಣವನ್ನು ನೆರವೇರಿಸಿದ ನಿವೃತ್ತ ಯೋಧ ದಯಾನಂದ ಇವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಾರ್ಯಕ್ರಮದ ಬಗ್ಗೆ ವಿಶೇಷ ಪ್ರಶಾಂಸೆಯನ್ನು ಎಲ್ಲ ಸದಸ್ಯರಿಗೆ ತಿಳಿಸಿ ಅವರು ಜೀವನದಲ್ಲಿ ನಡೆದು ಬಂದ ದಾರಿಯನ್ನು ವಿವರಿಸಿ ಮುಂದೆ ಕೂಡ ಸಮಾಜ ಸೇವೆಯನ್ನು ಮಾಡುವ ಸಲಹೆಯನ್ನು ನೀಡಿದರು ಹಾಗೂ ನಿವೃತ್ತ ಸೈನಿಕರ ಸಂಘ ಸದಾ ನಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು.

35 ವರ್ಷಗಳ ಡೆಕೋರೆಷನ್ ವೃತ್ತಿಯ ಅನುಭವವಿರುವ ಹಿರಿಯ ಸದಸ್ಯ ವಿಲಿಯಂ ಪಾಂಡವರಕಲ್ಲು ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಸ್ಥಳದ ಮಾಲಕ ಜೇಮ್ಸ್ ಡಿಸೋಜಾ ಮಾತಾನಾಡಿ ದೇಶಕ್ಕೆ ಗೌರವ ಕೊಡುವಂತಹ ಕಾರ್ಯಕ್ರಮವನ್ನು ನಮ್ಮ ಸ್ಥಳದಲ್ಲಿ ಆಯೋಜಿಸಿದ್ದಕ್ಕಾಗಿ ಪ್ಲವರ್ ಡೆಕೋರೆಟರ್ಸ್ ಬೆಳ್ತಂಗಡಿ ವಲಯಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಇನ್ನು ಮುಂದೆ ಧ್ವಜಸ್ಥಂಬವನ್ನು ನಮ್ಮ ವತಿಯಿಂದಲ್ಲೆ ಹಾಕಿ ಕೋಡುವ ಭರವಸೆಯನ್ನು ನೀಡಿ ಮುಂದೆಯೂ ಇಲ್ಲಿಯೇ ಧ್ವಜಾರೋಹಣ ಮಾಡಬೇಕಾಗಿ ಕೋರಿಕೊಂಡರು ಹಾಗೂ ಡೆಕೋರೆಷನ್ ವೃತ್ತಿ ಸುಲಭದಾಯಕ ವೃತ್ತಿ ಅಲ್ಲ, ಗ್ರಾಹಕರನ್ನು ಸಂತೃಪ್ತಿಗೊಳಿಸಲು ನೀವು ಹರಸಾಹಸ ಪಡಬೇಕು ಎಂದು ಶ್ಲಾಘಿಸಿದರು.

ಕಿರಣ್ ದೊಂಡೊಲೆ ನಿರೂಪಿಸಿ, ಸ್ವಾಗತಿಸಿದರು. ಸೀತಾರಾಮ್ ಆರ್ ವಂದಿಸಿದರು. ಸಂಘಟನ ಕಾರ್ಯದರ್ಶಿ ಶಶಿಕಾಂತ್, ಸಂಘದ ಸದಸ್ಯರು ಸಹಕರಿಸಿದರು.

Related posts

ಬೆಳ್ತಂಗಡಿ: ಖಾಸಗಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಸರಕಾರಿ ಪ.ಪೂ. ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಎ.12: ಬೆಳ್ತಂಗಡಿ ಟೀಮ್ ನವಭಾರತ್ ಆಶ್ರಯದಲ್ಲಿ ದಿ. ತುಷಾರ್. ಕೆ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya

ಅಧಿಕೃತ ಪಡಿತರ ಚೀಟಿ ನವೀಕರಣ ಕೇಂದ್ರ, ಬಸ್ ಪಾಸ್ ವಿತರಣಾ ಕೇಂದ್ರವಾದ ಕರ್ನಾಟಕ ಒನ್ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya
error: Content is protected !!