ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಸಂಜಯ್ ನಗರ ಜಂಕ್ಷನ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣವನ್ನು ಅಧ್ಯಕ್ಷರಾದ ರಿಯಾಝ್ ಐ.ಬಿ ಅವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ನವಾಝ್ ಮಾಸ್ಟರ್, ಮೆಹಬೂಬ್ ಸಂಜಯ ನಗರ ಆಗಮಿಸಿದ್ದರು.

2026 ನೇ ಸಾಲಿನ SSLC, ದ್ವಿತೀಯ PUC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಿರಿಯರಾದ ಹಕೀಮ್ ಸಿ.ಎಂ ಮತ್ತು ಬೆಳ್ತಂಗಡಿ ತಾಲೂಕಿನ ಆಪತ್ಬಾಂಧವ, ಈಜು ಪರಿಣಿತ ಇಸ್ಮಾಯಿಲ್ ಸಂಜಯನಗರ ಇವರ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಶಬೀರ್ ಸಂಜಯನಗರ, ಜೊತೆ ಕಾರ್ಯದರ್ಶಿ ಅಶ್ರಫ್ ಕಟ್ಟೆ, ಉಪಾಧ್ಯಕ್ಷರಾದ ಶೈರೋಝ್ ಉದಯನಗರ, ಕೋಶಾಧಿಕಾರಿಯಾದ ರಿಜ್ವಾನ್ ಬಿ.ಕೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಇಸ್ಮಾಲಿ ಐ.ಬಿ, ಅಬ್ಬಾಸ್ ಸಂಜಯನಗರ, ಹನೀಫ್ ವರ್ಷಾ, ಖಾದರ್ ಕುದ್ರಡ್ಕ, ಹಕೀಮ್ ಸುದೇಮುಗೇರು, ಶರೀಫ್ ವೆಲ್ಕಮ್, ಊರಿನ ಹಿರಿಯರು ನಾಗರೀಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರಶೀದ್ ಬೆಳ್ತಂಗಡಿ ಮಾಡಿದರು. ಕಾರ್ಯದರ್ಶಿಗಳಾದ ಶಬೀರ್ ಸಂಜಯನಗರ ಸ್ವಾಗತಿಸಿ, ಹನೀಫ್ ವರ್ಷಾ ಧನ್ಯವಾದಗೈದರು.












