ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ ನಡೆಯುವ 29ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಹಂಚಿಕೆಯು ಆ.16ರಂದು ಉಜಿರೆ ಕುಂಜರ್ಪದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಇದರ ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು, ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಸಂಚಾಲಕ ಮನೋಜ್ ಕುಂಜರ್ಪ, ಸಾಮಾಜಿಕ ಜಾಲತಾಣದ ಸಂಚಾಲಕ ಪ್ರಜ್ವಲ್ ಕೆವಿ ಕಲ್ಮ0ಜ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಮೋಹನ್ ಶೆಟ್ಟಿ ಪಾನ್ಯಲು, ಕೋಶಾಧಿಕಾರಿ ಜಯಂತ್ (ಪದ್ಮನಾಭ) ಶೆಟ್ಟಿ ಅರ್ತಿಲ, ಉಮೇಶ್ ಪೂಜಾರಿ ಅತ್ತಾಜೆ, ವೆಂಕಟೇಶ್ ಕಾಶಿಬೆಟ್ಟು, ಮುಕೇಶ್ ಶೆಟ್ಟಿ ಪಾನ್ಯಲು, ಜನಾರ್ದನ ಕಾಯರ್ತಡ್ಕ, ಪ್ರಣಮ್ ಶೆಟ್ಟಿ ತಿಮರೋಡಿ, ಸಂತೋಷ್ ಪೂಜಾರಿ ಕಡ0ಬು, ರಮೇಶ್ ಬೊಳ್ಳಿ ಮಾಚಾರು, ಗಣೇಶ್ ಶೆಟ್ಟಿ ಕುಂಟಿನಿ, ರಾಘವೇಂದ್ರ ಮಾಚರ್, ಕೃಷ್ಣಪ್ಪ ಪಾರ, ಸುದರ್ಶನ್ ಶೆಟ್ಟಿ ಕುಂಟಿನಿ, ಯೋಗೀಶ್ ಪೂಜಾರಿ ಕುಂಟಿನಿ ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.












