ನಾನು ಬಿಜೆಪಿ ಸದಸ್ಯನಾದರೂ ಅವರೊಂದಿಗೆ ಆತ್ಮೀಯತೆ ಇದೆ. ಬಹಳ ವರ್ಷದ ಪರಿಚಯ ಅವರದ್ದು. ರಾಜ್ಯದ ಜನತೆಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದ್ದಂತೆ ಆಡಳಿತ ನೀಡಿ ಜನರ ಪ್ರೀತಿ ವಿಶ್ವಾಸ ಗಳಿಸಿ, ವಿರೋಧ ಪಕ್ಷದವರನ್ನು ಸಮಾನವಾಗಿ ನೋಡಿ ಆಡಳಿತ ನಡೆಸಿದ್ದಲ್ಲಿ ಮುಂದೆಯೂ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಅವರಿಗೆ ನಮ್ಮ ಸಂಪೂರ್ಣ ಸಹಕಾರ ನೀಡುವುದರ ಮೂಲಕ ಶುಭಾಶಯ ಸಲ್ಲಿಸುತ್ತೇವೆ.
ಅವರು ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ವೇಳೆ ಮತ್ತೊಮ್ಮೆ ಸಂಸ್ಥೆಗೆ ಭೇಟಿ ನೀಡುವಂತೆ ಮನವಿ ಮಾಡುತ್ತೇವೆ. ನಮ್ಮ ಸಮುದಾಯದ ಶಿಕ್ಷಣ ಸಂಸ್ಥೆಗೆ ಸಹಕಾರ ನೀಡುವರು ಎಂದು ಭಾವಿಸುತ್ತೇವೆ.












