August 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ: ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮ

ಬೆಳ್ತಂಗಡಿ: ಅಳದಂಗಡಿಯಲ್ಲಿ ಶ್ರೀ ನಮನ ಸಭಾಭಾವನ ಶಾಖೆಯಲ್ಲಿ 70 ದಿವಸಗಳ ಯೋಗಶಿಕ್ಷಣವು ಪೂರ್ಣಗೊಂಡು, ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮವು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಆ.16 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಳದಂಗಡಿಯ ಜನಪ್ರಿಯ ವೈದ್ಯರಾದ ಸುಷ್ಮಾ ಡೋಂಗ್ರೆ ರವರು ಅಮ್ಮನ ಕರ್ತವ್ಯ, ಅಮ್ಮನನ್ನು ಸಮ್ಮಾನ ಮಾಡಬೇಕಾದ ನಮ್ಮ ಕರ್ತವ್ಯಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಖೆಯ ಶಿಕ್ಷಕಿ ಗೀತಾ ಸಮಿತಿಯಲ್ಲಿ ಮಾತೃಪೂಜನ ಕಾರ್ಯಕ್ರಮವನ್ನು ಆಚರಿಸುವ ಉದ್ದೇಶವನ್ನು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ಶುಭಾ, ಸಂಚಾರಿ ಶಿಕ್ಷಕರು, ಪುತ್ತೂರು, ಇವರು ಸಮಿತಿಯ ಪರಿಚಯದೊಂದಿಗೆ ಅಮ್ಮನ ಪ್ರಾಮುಖ್ಯತೆಗಳನ್ನು ಮನಮುಟ್ಟುವಂತೆ ತಿಳಿಸಿದರು. ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಶಾಖೆಯ ಯೋಗಬಂಧುಗಳಾದ ಬೇಬಿ ಪಿಲ್ಯ, ಜಗದೀಶ್ , ನಾಗಭೂಷಣ್, ಪ್ರಸಾದ್ , ಗಿರೀಶ್, ಸುಜಾತ, ರಶ್ಮಿ, ಪ್ರಸನ್ನ, ಉಷಾ ಯೋಗಾಭ್ಯಾಸದಿಂದ ತಮಗಾದ ಅನುಭವಗಳನ್ನು ಹಂಚಿಕೊಂಡರು.

ನೇತ್ರಾವತಿ ವಲಯ ಸಂಯೋಜಕರಾದ ಜಯರಾಮ, ಪುತ್ತೂರು ತಾಲೂಕು ಶಿಕ್ಷಣ ಪ್ರಮುಖರಾದ ಸತೀಶ್ ಹಾಗೂ ಶ್ರೀಮತಿ ವಿನಯ ರವರು ಯೋಗಬಂಧುಗಳಿಗೆ ಆಟಗಳನ್ನು ಆಡಿಸುವ ಮೂಲಕ ಅವರನ್ನು ಹುರಿದುಂಬಿಸಿದರು.


ಅಳದಂಗಡಿಯ ಶ್ರೀ ನಮನ ಸಭಾಭವನ ಶಾಖೆಯ ಯೋಗಬಂಧುಗಳು ತಯಾರಿಸಿದ ಶುಚಿ-ರುಚಿಯಾದ ಪ್ರಸಾದವನ್ನು ಅನ್ನಪೂರ್ಣೇಶ್ವರಿ ಮಂತ್ರ ಪಠಣದ ನಂತರ ಎಲ್ಲರಿಗೂ ಕೈತುತ್ತು ನೀಡಿ ಹಂಚಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಮಾತೃಶಾಖೆಯಾದ ಬೆಳ್ತಂಗಡಿ ಶಾಖೆಯ ಯೋಗಬಂಧುಗಳು ಸಹಕಾರವನ್ನು ನೀಡಿದರು. ನಮನ ಸಭಾಭವನದ ಮಾಲಕರಾದ ಸತೀಶ್ ಉಪಸ್ಥಿತರಿದ್ದರು.

ಪುಷ್ಪಾ ಪ್ರಾರ್ಥಿಸಿ, ಮಾಲಾ ಸ್ವಾಗತಿಸಿದರು. ಶ್ರೀ ನಮನ ಸಭಾಭವನ ಶಾಖೆಯ 70 ದಿನಗಳ ವರದಿಯನ್ನು ಭಾರತಿ ಕಾಪಿನಡ್ಕ ವಾಚಿಸಿದರು. ನಿರೀಕ್ಷಾ ನಿರೂಪಿಸಿ , ಶ್ರೀಮತಿ ಹರಿಣಾಕ್ಷಿ ವಂದಿಸಿದರು.

Related posts

ಕಕ್ಕಿಂಜೆಯಲ್ಲಿ ದ್ರಿಷ್ಠಿ ಒಪ್ಟಿಕಲ್ಸ್ ಶುಭಾರಂಭ

Suddi Udaya

ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಯವರಿಂದ ಧನಸಹಾಯ ವಿತರಣೆ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ : ಆಕಾಶಕಾಯಗಳ ವೀಕ್ಷಣೆ

Suddi Udaya

ಹುಣ್ಸೆಕಟ್ಟೆ: ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಹೆಗ್ಡೆ ಆಯ್ಕೆ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya
error: Content is protected !!