August 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಸಾಧನೆ.

ಕಕ್ಯಪದವು :ಇಂಟರ್‌ನ್ಯಾಷನಲ್ ಯಮಾಟೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾದ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್–2026 ಹಾಗೂ ಇಂಡಿಪೆಂಡೆನ್ಸ್ ಕಪ್ ಕರಾಟೆ ಸ್ಪರ್ಧೆಯು ಸುರತ್ಕಲ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ದೇಶದ ವಿವಿಧ ಭಾಗಗಳಿಂದ ಕರಾಟೆ ಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದರು. ಕಟಾ ವಿಭಾಗದಲ್ಲಿ 6ನೇ ತರಗತಿಯ ಲವೀಶ್ ಹಾಗೂ ದಿಶಾ.ವೈ ಪ್ರಥಮ ಸ್ಥಾನ,6ನೇ ತರಗತಿಯ ಶ್ರವಣ್, ಆದಿತ್ಯ ಹಾಗೂ ವರುಣ್. ಡಿ ದ್ವಿತೀಯ ಸ್ಥಾನ, 7ನೇ ತರಗತಿಯ ಚಿರಾಗ್.ಎಂ. ಏನ್, ಪ್ರಥಮ್,6ನೇ ತರಗತಿಯ ಅಭಿಶ್, ಸ್ಪಂದನ, ಶಿವಪ್ರಿಯಾ, ತ್ರಿಶಿಕ. ಎಂ. ಏನ್, ವರುಣ್. ಡಿ, ಹಾಗೂ 5ನೇ ತರಗತಿಯ ಧನ್ವಿನ್ ನಿಧಿಶ್, 4ನೇ ತರಗತಿಯ ಶಿವಂಶ್ ಶೆಟ್ಟಿ, ದಿಶಾನ್, ಮೇಘನಾ. ಪಿ. ಸುವರ್ಣ, ಕೃತಿಕ್, ಚಿರಾಗ್, ಜೆ. ಪಿ. ಆರ್ಯನ್, ಶಮ್ನ ಫಾತಿಮಾ ಹಾಗೂ 2ನೇ ತರಗತಿಯ ದಕ್ಷ್. ಪಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಕುಮಿಟೆ ವಿಭಾಗದಲ್ಲಿ 6ನೇ ತರಗತಿಯ ಲವೀಶ್, ಅಭೀಶ್, ದಿಶಾ. ವೈ, ತ್ರಿಶಿಕ. ಎಂ. ಎನ್ ಹಾಗೂ 7ನೇ ತರಗತಿಯ ಚಿರಾಗ್ ಎಂ. ಎನ್ ಪ್ರಥಮ ಸ್ಥಾನ,6ನೇ ತರಗತಿಯ ಸ್ಪಂದನ, ಹೆಚ್, ಪೂಜಾರಿ ದ್ವಿತೀಯ ಸ್ಥಾನ, 7ನೇ ತರಗತಿಯ ಸಮರ್ಥ್, 6ನೇ ತರಗತಿಯ ಶ್ರವಣ್ ಹಾಗೂ 4ನೇ ತರಗತಿಯ ಶಮ್ನ ಫಾತಿಮಾ ತೃತೀಯ ಸ್ಥಾನಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ಶ್ರೀಯುತ ಅಶೋಕ್ ಆಚಾರ್ಯ ತರಬೇತಿ ನೀಡಿರುತ್ತಾರೆ.

Related posts

ಮಡಂತ್ಯಾರು ಆಟೋ ಚಾಲಕ ಮಾಲಕರ ಸಂಘದಿಂದ ಬಳ್ಳಮಂಜ ಪೇಟೆಯಲ್ಲಿ ಸಿಸಿಟಿವಿ ಅಳವಡಿಕೆ ಕುರಿತು ಪಿಡಿಒ ರವರಿಗೆ ಮನವಿ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜಲಾನಯನ ಮಹೋತ್ಸವ ಅಭಿಯಾನ

Suddi Udaya

ಡಿ.30 : ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದ ನೇತೃತ್ವದಲ್ಲಿ 3ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯ ಹಿರಿಯ ಹೊಟೇಲ್ ಉದ್ಯಮಿ ಅಬೂಬಕ್ಕರ್ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ವತಿಯಿಂದ ಅಂತರ್ ‍ಜಿಲ್ಲಾ ಚಿತ್ಪಾವನಿ ಭಾಷಾ ಕವಿಗೋಷ್ಠಿಯ ಸಮಾರೋಪ

Suddi Udaya

ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಮಾಡ್ಯಾಲೋಟ್ಟುನಲ್ಲಿ ರಸ್ತೆಗೆ ಗುಡ್ಡ ಕುಸಿತ

Suddi Udaya
error: Content is protected !!