August 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಸಾಧನೆ.

ಕಕ್ಯಪದವು :ಇಂಟರ್‌ನ್ಯಾಷನಲ್ ಯಮಾಟೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾದ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್–2026 ಹಾಗೂ ಇಂಡಿಪೆಂಡೆನ್ಸ್ ಕಪ್ ಕರಾಟೆ ಸ್ಪರ್ಧೆಯು ಸುರತ್ಕಲ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ದೇಶದ ವಿವಿಧ ಭಾಗಗಳಿಂದ ಕರಾಟೆ ಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದರು. ಕಟಾ ವಿಭಾಗದಲ್ಲಿ 6ನೇ ತರಗತಿಯ ಲವೀಶ್ ಹಾಗೂ ದಿಶಾ.ವೈ ಪ್ರಥಮ ಸ್ಥಾನ,6ನೇ ತರಗತಿಯ ಶ್ರವಣ್, ಆದಿತ್ಯ ಹಾಗೂ ವರುಣ್. ಡಿ ದ್ವಿತೀಯ ಸ್ಥಾನ, 7ನೇ ತರಗತಿಯ ಚಿರಾಗ್.ಎಂ. ಏನ್, ಪ್ರಥಮ್,6ನೇ ತರಗತಿಯ ಅಭಿಶ್, ಸ್ಪಂದನ, ಶಿವಪ್ರಿಯಾ, ತ್ರಿಶಿಕ. ಎಂ. ಏನ್, ವರುಣ್. ಡಿ, ಹಾಗೂ 5ನೇ ತರಗತಿಯ ಧನ್ವಿನ್ ನಿಧಿಶ್, 4ನೇ ತರಗತಿಯ ಶಿವಂಶ್ ಶೆಟ್ಟಿ, ದಿಶಾನ್, ಮೇಘನಾ. ಪಿ. ಸುವರ್ಣ, ಕೃತಿಕ್, ಚಿರಾಗ್, ಜೆ. ಪಿ. ಆರ್ಯನ್, ಶಮ್ನ ಫಾತಿಮಾ ಹಾಗೂ 2ನೇ ತರಗತಿಯ ದಕ್ಷ್. ಪಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಕುಮಿಟೆ ವಿಭಾಗದಲ್ಲಿ 6ನೇ ತರಗತಿಯ ಲವೀಶ್, ಅಭೀಶ್, ದಿಶಾ. ವೈ, ತ್ರಿಶಿಕ. ಎಂ. ಎನ್ ಹಾಗೂ 7ನೇ ತರಗತಿಯ ಚಿರಾಗ್ ಎಂ. ಎನ್ ಪ್ರಥಮ ಸ್ಥಾನ,6ನೇ ತರಗತಿಯ ಸ್ಪಂದನ, ಹೆಚ್, ಪೂಜಾರಿ ದ್ವಿತೀಯ ಸ್ಥಾನ, 7ನೇ ತರಗತಿಯ ಸಮರ್ಥ್, 6ನೇ ತರಗತಿಯ ಶ್ರವಣ್ ಹಾಗೂ 4ನೇ ತರಗತಿಯ ಶಮ್ನ ಫಾತಿಮಾ ತೃತೀಯ ಸ್ಥಾನಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ಶ್ರೀಯುತ ಅಶೋಕ್ ಆಚಾರ್ಯ ತರಬೇತಿ ನೀಡಿರುತ್ತಾರೆ.

Related posts

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ

Suddi Udaya

ಮುಗಳಿ ಬ್ರಹ್ಮ ಕ್ಷೇತ್ರ ದೇವರ ಸನ್ನಿಧಿ ಬಸದಿ ಒಳಗೆ ನುಗ್ಗಿದ್ದ ನೀರು

Suddi Udaya

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

Suddi Udaya

ಮೇ 27: ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ‘ಜನರ ಬಳಿಗೆ – ತಾಲೂಕು ಆಡಳಿತ’ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಮುಂಡಾಜೆ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

Suddi Udaya
error: Content is protected !!