ಕಕ್ಯಪದವು :ಇಂಟರ್ನ್ಯಾಷನಲ್ ಯಮಾಟೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾದ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ಶಿಪ್–2026 ಹಾಗೂ ಇಂಡಿಪೆಂಡೆನ್ಸ್ ಕಪ್ ಕರಾಟೆ ಸ್ಪರ್ಧೆಯು ಸುರತ್ಕಲ್ ಚರ್ಚ್ ಸಭಾಭವನದಲ್ಲಿ ನಡೆಯಿತು.
ದೇಶದ ವಿವಿಧ ಭಾಗಗಳಿಂದ ಕರಾಟೆ ಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದರು. ಕಟಾ ವಿಭಾಗದಲ್ಲಿ 6ನೇ ತರಗತಿಯ ಲವೀಶ್ ಹಾಗೂ ದಿಶಾ.ವೈ ಪ್ರಥಮ ಸ್ಥಾನ,6ನೇ ತರಗತಿಯ ಶ್ರವಣ್, ಆದಿತ್ಯ ಹಾಗೂ ವರುಣ್. ಡಿ ದ್ವಿತೀಯ ಸ್ಥಾನ, 7ನೇ ತರಗತಿಯ ಚಿರಾಗ್.ಎಂ. ಏನ್, ಪ್ರಥಮ್,6ನೇ ತರಗತಿಯ ಅಭಿಶ್, ಸ್ಪಂದನ, ಶಿವಪ್ರಿಯಾ, ತ್ರಿಶಿಕ. ಎಂ. ಏನ್, ವರುಣ್. ಡಿ, ಹಾಗೂ 5ನೇ ತರಗತಿಯ ಧನ್ವಿನ್ ನಿಧಿಶ್, 4ನೇ ತರಗತಿಯ ಶಿವಂಶ್ ಶೆಟ್ಟಿ, ದಿಶಾನ್, ಮೇಘನಾ. ಪಿ. ಸುವರ್ಣ, ಕೃತಿಕ್, ಚಿರಾಗ್, ಜೆ. ಪಿ. ಆರ್ಯನ್, ಶಮ್ನ ಫಾತಿಮಾ ಹಾಗೂ 2ನೇ ತರಗತಿಯ ದಕ್ಷ್. ಪಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಕುಮಿಟೆ ವಿಭಾಗದಲ್ಲಿ 6ನೇ ತರಗತಿಯ ಲವೀಶ್, ಅಭೀಶ್, ದಿಶಾ. ವೈ, ತ್ರಿಶಿಕ. ಎಂ. ಎನ್ ಹಾಗೂ 7ನೇ ತರಗತಿಯ ಚಿರಾಗ್ ಎಂ. ಎನ್ ಪ್ರಥಮ ಸ್ಥಾನ,6ನೇ ತರಗತಿಯ ಸ್ಪಂದನ, ಹೆಚ್, ಪೂಜಾರಿ ದ್ವಿತೀಯ ಸ್ಥಾನ, 7ನೇ ತರಗತಿಯ ಸಮರ್ಥ್, 6ನೇ ತರಗತಿಯ ಶ್ರವಣ್ ಹಾಗೂ 4ನೇ ತರಗತಿಯ ಶಮ್ನ ಫಾತಿಮಾ ತೃತೀಯ ಸ್ಥಾನಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ಶ್ರೀಯುತ ಅಶೋಕ್ ಆಚಾರ್ಯ ತರಬೇತಿ ನೀಡಿರುತ್ತಾರೆ.












