August 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಲಾಯ ಗುತ್ತು ಧರ್ಮಚಾವಡಿಯಲ್ಲಿ ಸಂಪತ್ ಬಿ. ಸುವರ್ಣರಿಗೆ ಅಭಿನಂದನೆ

ಬೆಳ್ತಂಗಡಿ: ತುಳುನಾಡಿನ ಹೆಮ್ಮೆಯ ಸಾಂಪ್ರದಾಯಿಕ ಕೌಟುಂಬಿಕ ಪರಂಪರೆ ಹಾಗೂ ಧಾರ್ಮಿಕ ಕೇಂದ್ರವಾದ ಶ್ರೀ ಕಲಾಯ ಗುತ್ತು ಧರ್ಮಚಾವಡಿಯಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ ಅವರಿಗೆ ಕಲಾಯಗುತ್ತಿನ ಕುಟುಂಬಸ್ಥರಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕರಾವಳಿ ಭಾಗದ ಗುತ್ತಿನ ಮನೆಗಳ ಸಾಂಸ್ಕೃತಿಕ ಹಿನ್ನೆಲೆ, ದೈವಾರಾಧನೆ ಹಾಗೂ ಸಾಮಾಜಿಕ ಒಗ್ಗಟ್ಟನ್ನು ಉಳಿಸಿ ಬೆಳೆಸುವಲ್ಲಿ ಕಲಾಯಿ ಗುತ್ತು ಧರ್ಮಚಾವಡಿಯು 200 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಈ ಧರ್ಮಚಾವಡಿಯ ನೇತೃತ್ವವನ್ನು ವಹಿಸಿಕೊಂಡು, ಕೌಟುಂಬಿಕ ಧಾರ್ಮಿಕ ಆಚರಣೆಗಳನ್ನು ಶ್ರದ್ಧಾಭಕ್ತಿಯಿಂದ ಮುನ್ನಡೆಸುತ್ತಿರುವ ಯಜಮಾನ ಚಿದಾನಂದ ಪೂಜಾರಿ ಅವರ ನೇತೃತ್ವದಲ್ಲಿ, ಸಂಪತ್ ಬಿ.ಸುವರ್ಣ ಅವರ ಸೇವೆಯನ್ನು ಶ್ಲಾಘಿಸಿ ಈ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕಲಾಯ ಗುತ್ತು ಕುಟುಂಬಸ್ಥರಾದ ಉಮೇಶ್ ಪೂಜಾರಿ ಕಲಾಯ ಪ್ರಭಾಕರ ಪೂಜಾರಿ ಕಲಾಯ, ಆನಂದ ಪೂಜಾರಿ ಕಲಾಯ ,ಸುರೇಶ್ ಪೂಜಾರಿ ಕಲಾಯ, ಸುಂದರ ಪೂಜಾರಿ ಕಲಾಯ ,ಪದ್ಮ ಪೂಜಾರಿ ವೇಣೂರು, ಜನಾರ್ಧನ ಪೂಜಾರಿ ವೇಣೂರು ಹಾಗೂ ಸುಮಾರು 400 ಕುಟುಂಬಿಕರ ಸಮ್ಮುಖದಲ್ಲಿ ಈ ಗೌರವ ಅಭಿನಂದನೆ ಜರುಗಿತು.

Related posts

ಉಜಿರೆ: ‘ಎಸ್.ಡಿ.ಎಂ. ನೆನಪಿನಂಗಳ’ದ ಹದಿನಾರನೇ ಕಂತಿನ ಕಾರ್ಯಕ್ರಮ

Suddi Udaya

ಉಜಿರೆ: ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ

Suddi Udaya

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ, ಸನ್ಮಾನ

Suddi Udaya

ಸುಲ್ಕೇರಿ: ಅನುದಾನಿತ ಖಾಸಗಿ ಹಿ.ಪ್ರಾ. ಹಾಗೂ ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಆಡಳಿತ ಮಂಡಳಿಯ 15 ನಿರ್ದೇಶಕರುಗಳ ಸ್ಥಾನಕ್ಕೆ ಅವಿರೋಧ ಆಯ್ಕೆ

Suddi Udaya

ಎಸ್‌.ಐ.ಟಿ ಕಾರ್ಯಾಚರಣೆಯ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ: ವಕೀಲ ಮಂಜುನಾಥ ಎನ್. ರವರ ವಿರುದ್ಧ ದೂರು ದಾಖಲು

Suddi Udaya
error: Content is protected !!