ಅರಸಿನಮಕ್ಕಿ : ರಾಜ್ಯದ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿಯ ಜನಪ್ರಿಯ ಶಾಸಕ ಹರೀಶ್ ಪೂಂಜರವರಿಗೆ ಶಿಶಿಲ ಸೀಮಾ ಚಿತ್ಪಾವನ ಸಮಾಜದ ಪರವಾಗಿ ಅವರ ಸ್ವಗೃಹ ‘ಮಿಥಿಲಾ’ದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಸಮಾಜದ ಹಿರಿಯರಾದ ಗಣೇಶ್ ವಿ. ಗೋಖಲೆ ಐಂಗುಡ, ಕಾರ್ಯದರ್ಶಿ ವೆಂಕಟೇಶ ದಾಮಲೆ ಬಸ್ತಿ, ಚಿತ್ಪಾವನ ಸಮಾಜದ ಮುಂದಾಳುಗಳಾದ ಶ್ರೀಕರ ಭಿಡೆ ಹೊಸ್ತೋಟ, ಶ್ರೀರಂಗ ದಾಮಲೆ ಅರಸಿನಮಕ್ಕಿ, ಜಯರಾಮ ಪಾಳಂದ್ಯೆ ಗುಡ್ಡೆತೋಟ, ಪುರುಷೋತ್ತಮ ಅಭ್ಯಂಕರ್ ಬೂಡುಮುಗೇರು, ವಿಠೋಬಾ ರಕುಮಾಯಿ ದೇವಸ್ಥಾನದ ಜಿತೇಂದ್ರ ಹೆಬ್ಬಾರ್ ನೆಕ್ಕರಡ್ಕ , ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದ ಅರ್ಚಕರಾದ ವೃಷಾಂಕ್ ಖಾಡಿಲ್ಕರ್, ಅಭಿನಯ ಶೆಂಡ್ಯೆ ಮೊದಲಾದವರು ಉಪಸ್ಥಿತರಿದ್ದು ಚಿತ್ಪಾವನ ಕುಲಗುರು ಪರಶುರಾಮರ ಚಿತ್ರವನ್ನೊಳಗೊಂಡ ಸ್ಮರಣಿಕೆಯನ್ನು ನೀಡಿ ಗೌರವಿಸಿ ಅಭಿನಂದಿಸಿದರು.











