ಬೆಳ್ತಂಗಡಿ : ಆ.29 ರಿಂದ ಆ.31 ರವರೆಗೆ ಬೆಳ್ತಂಗಡಿ ಲಾಯಿಲದಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯುವ ಆರಾಧನ ಮಹೋತ್ಸವದ ಪೂರ್ವಭಾವಿ ಸಭೆ ರಾಯರ ಮಠದಲ್ಲಿ ಆ.25ರಂದು ಶ್ರೀ ಪೀತಾಂಬರ ಹೇರಾಜೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಅವರು ಮಾತನಾಡುತ್ತಾ ಊರ ಪರ ಊರಿನಿಂದ ಹೆಚ್ಚಿನ ಭಕ್ತರು ದಕ್ಷಿಣದ ಕಿರು ಮಂತ್ರಾಲಯ ಎಂಬ ಹೆಗ್ಗಳಿಕೆಗೆ ಪಾತ್ರ ವಾದ ರಾಯರ ಮಠಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು. ಆ.30 ರಂದು ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿರುವುದಾಗಿ ಅವರು ತಿಳಿಸಿದರು.
2026 ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದೆಂದು ಪ್ರೊ. ಡಾ ಬಿ ಎ ಕುಮಾರ ಹೆಗ್ಡೆ ಮತ್ತು ಪ್ರೊ. ಎ ಕೃಷ್ಣಪ್ಪ ಪೂಜಾರಿಯವರು ತಿಳಿಸಿದರು.
ಕಾರ್ಯದರ್ಶಿ ವಸಂತ ಸುವರ್ಣ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿ ಸೋಮೇಗೌಡ, ಶ್ರೀಮತಿ ಉಮಾ ರಾವ್, ಶ್ರೀಮತಿ ಸುಶೀಲಾ ಹೆಗ್ಡೆ, ಮಂಜುನಾಥ ರೈ, ಕೃಷ್ಣ ಶೆಟ್ಟಿ, ಜಯಂತ ರಾಘವೇಂದ್ರ ನಗರ, ಶ್ರೀಮತಿ ಸುಧಾಮಣಿ ರಮಾನಂದ, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ಶ್ರವಣ್ ರಾಜ್ ವಂದಿಸಿದರು.











