ಉಜಿರೆ: ಇಲ್ಲಿಯ ರತ್ನಮಾನಸ ವಿದ್ಯಾರ್ಥಿ ನಿಲಯಕ್ಕೆ ತಾಲೂಕು ಆರೋಗ್ಯಾಧಿಕಾರಿ ಸಂಜತ್ ವೈದ್ಯ ಅಧಿಕಾರಿ ಡಾ. ವೆಂಕಟಸ್ವಾಮಿ ( ಸ್ತ್ರೀ ರೋಗ ತಜ್ಞರು) ಹಾಗೂ ಡಾ.ರಾಘವೇಂದ್ರ ಶಸ್ತ್ರಚಿಕಿತ್ಸೆ ತಜ್ಞರು ಭೇಟಿ ನೀಡಿದರು.
ಸ್ತ್ರೀ ರೋಗ ತಜ್ಞರಾದ ಡಾ.ವೆಂಕಟ ಸ್ವಾಮಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಣವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿ ಮಾರ್ಗದರ್ಶನವನ್ನು ನೀಡಬೇಕು . ಅವರು ತನ್ನ ಬಾಲ್ಯದ ಹಾಸ್ಟೆಲ್ ಜೀವನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ತಾಲೂಕು ಅಧಿಕಾರಿಯಾದ ಸಂಜಾತ ಮಾತನಾಡಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆಯ ಪ್ರಾತ್ಯಕ್ಷಿಕೆಯನ್ನು ನೀಡಿ ಆರೋಗ್ಯ ಸಂರಕ್ಷಣೆ ಬಗ್ಗೆ ತಿಳಿಸಿದರು
ರತ್ನಮಾನಸ ನಿಲಯದ ಪಾಲಕರಾದ ಯತೀಶ್ ಕೆ ಬಳಂಜ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು . ವೇದಿಕೆಯಲ್ಲಿ ಭಜನ ತರಬೇತುದಾರರಾದ ನಾಗೇಶ್ ನೇರಿಯ ಹಾಗೂ ರತ್ನಮಾನಸದ ಅಧ್ಯಾಪಕರಾದ ರವಿಚಂದ್ರ ಹಾಗೂ ಉದಯರಾಜ್ ,ದೀಪಕ್ ಹಾಗೂ ರತ್ನಮಾನಸ ದ ಹಿರಿಯ ವಿಧ್ಯಾರ್ಥಿ ಗಣೇಶ್ ಉಪಸ್ಥಿತರಿದ್ದರು . ರತ್ನ ಮಾನಸದ ವಿದ್ಯಾರ್ಥಿಗಳ ಜೀವನ ಶಿಕ್ಷಣಗಳ ಬಗ್ಗೆ ತಿಳಿದು ಶ್ಲಾಘನೆ ವ್ಯಕ್ತಪಡಿಸಿದರು.











