ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಇವರ ಅಧ್ಯಕ್ಷತೆಯಲ್ಲಿ ನಮನ ಸಭಾಭವನದಲ್ಲಿ ಆ 27 ರಂದು ನಡೆಯಿತು.
ಬಳಿಕ ರಾಕೇಶ್ ಹೆಗ್ಡೆ ಅವರು ಮಾತನಾಡಿ ಆರ್ಥಿಕ ವರ್ಷದಲ್ಲಿ ಸಂಘವು ರೂ 517 ಕೋಟಿ ವ್ಯವಹಾರ ನಡೆಸಿ,ರೂ 2.12 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 13 ಡಿವಿಡೆಂಟ್ ನೀಡಲಾಗುವುದು.ಸಹಕಾರವೇ ಶಕ್ತಿ,ಸದಸ್ಯರ ವಿಶ್ವಾಸವೇ ಸಂಘದ ಯಶಸ್ಸು ಎಂದರು.

ಸೊಸೈಟಿಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು,ಎಲ್ಲರ ಸಹಕಾರ ಮುಖ್ಯವಾಗಿದೆ. ಸುವರ್ಣ ಸಂಭ್ರಮದ ಪ್ರಯುಕ್ತ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಉಪಾಧ್ಯಕ್ಷ ಜನಾರ್ಧನ,ನಿರ್ದೇಶಕರಾದ ಗುರುಪ್ರಸಾದ್ ,ವಿಶ್ವನಾಥ ಹೊಳ್ಳ,ಹೇಮಂತ್, ದೇವಿಪ್ರಸಾದ್ ಶೆಟ್ಟಿ, ದಿನೇಶ್ ಪಿಕೆ,ದೇಜಪ್ಪ ಪೂಜಾರಿ, ಕೊರಗಪ್ಪ, ಸುಂದರಿ, ಮಮತಾ, ಧರ್ಣಪ್ಪ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಅಧ್ಯಕ್ಷ ರಾಕೇಶ್ ಹೆಗ್ಡೆ ಸ್ವಾಗತಿಸಿದರು. ಸಿಇಓ ಮೀರಾ ವರದಿ ವಾಚಿಸಿದರು.ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಕೆ, ಸಿಬ್ಬಂದಿಗಳಾದ ಪ್ರಶಾಂತ್ ಎಸ್, ಭರತ್ ರಾಜ್,ಎನ್.ಜಗದೀಶ್ ಶೆಟ್ಟಿ, ಮಮತಾ, ಸಂತೋಷ ಎ, ಹರೀಶ ನಾಯ್ಕ, ಯತೀಶ, ದಿನೇಶ್ ಬಿ, ಪ್ರವೀಣ, ಶ್ರೀದೇವಿ, ಸುಮಲತಾ ಹಾಗೂ ಸದಸ್ಯರು ಸಹಕರಿಸಿದರು.











