
ಬೆಳ್ತಂಗಡಿ: ಕರ್ನಾಟಕ ಟಿವಿ ವತಿಯಿಂದ ನಡೆದ ಲೀಡರ್ಸ್ ಅವಾರ್ಡ್ 2025 ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದಲ್ಲಿ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ತಾಲೂಕಿನ ಶಾಸಕ ಹರೀಶ್ ಪೂಂಜರವರನ್ನು ಆ. 28ರಂದು ಅವರ ನಿವಾಸ ಮಿಥಿಲಾದಲ್ಲಿ ಪುದುವೆಟ್ಟು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗೌರವಿಸಿ, ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವಂತ್ ಗೌಡ ಡೆಚ್ಚಾರ್, ಪುದುವೆಟ್ಟು ಶಕ್ತಿ ಕೇಂದ್ರ ಪ್ರಮುಖ್ ಪೂರ್ಣಾಕ್ಷ ಬಾಯಿತ್ಯಾರು, ಪ್ರಮುಖರಾದ ಅಜಿತ್ ಕುಮಾರ್ ಜೈನ್, ಪ್ರಸನ್ನ ಹೆಬ್ಬಾರ್, ಭಾಸ್ಕರ ಅಡ್ಯ, ದಿವಾಕರ ಗೌಡ ಮುಚ್ಚಾರು, ಸೋಯ್ ವರ್ಗಿಸ್ ಪುದುವೆಟ್ಟು, ದಾಮೋದರ ಮುಜಾರ್ದಡ್ಡು, ಚಂದ್ರಹಾಸ ಮುಚ್ಚಾರು, ನಿತ್ಯಾನಂದ ಗೌಡ, ಶಶಿಧರ ಪೂಜಾರಿ ಗುಂಪಕಲ್ಲು , ಸುರೇಶ್ ಕೇರ್ಯ , ಚೇತನ್ ಮುಚ್ಚಾರು, ಧನ್ಯ ಕುಮಾರ್ ಭಂಡಾರಿ, ಹಿರಿಯರಾದ ರಮೇಶ್ ರಾವ್, ಮುಳಿಮಜಲು, ಲಿಂಗಪ್ಪ ಸಾಲಿಯಾನ್, ಹೊನ್ನಪ್ಪ ಗೌಡ ಮುಚ್ಚಾರು, ಕೃಷ್ಣಪ್ಪ ಪೂಜಾರಿ , ನಾರಾಯಣ ಪೂಜಾರಿ, ಕುಕ್ಕಪ್ಪ ಗೌಡ ಮುಚ್ಚಾರು, ರಾಘವ ಕಾರ್ಪಾಜೆ, ರೇಣುಕಾ, ಅಣ್ಣು ಗೌಡ ಬಡಕೊಟ್ಯ, ಅಕ್ಷತ್ ಗೌಡ, ಭರತ್ ಗೌಡ, ಸಜು ಖಂಡಿಗ, ರಂಗನಾಥ್, ಬಾಲಣ್ಣ ಗೌಡ, ಶೇಖರ್ ಗೌಡ, ಶೇಖರ್ ಪೂಜಾರಿ, ಟೋಕ್ಕಯ್ಯ ಗೌಡ, ಮೋಹನ್, ವಸಂತ ಪೂಜಾರಿ, ಒಬಯ್ಯ ಮುಜಾರ್ದಡ್ದು, ಸತೀಶ ಮುಚ್ಚಾರು, ವಿಕ್ರಮ್, ಪ್ರಮೋದ್ , ಭರತ್ ಮುಚ್ಚಾರು ಹಾಗೂ ಅನೇಕ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.











