ಮುಂಡಾಜೆ: ನಿವೃತ್ತ ಶಿಕ್ಷಕ ಹಾಗೂ ಕವಿ ಶಂಕರ್ ಎನ್. ತಾಮನ್ಕರ್ ಅವರು ತಮ್ಮ ತಂದೆ ದಿ. ನಾರಾಯಣ ತಾಮನ್ಕರ್ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ಶೈಕ್ಷಣಿಕ ಹಾಗೂ ಆರೋಗ್ಯ ಸಹಾಯದ ಅಂಗವಾಗಿ ಈ ಬಾರಿ ಎಂಟು ಅರ್ಹ ಫಲಾನುಭವಿಗಳಿಗೆ ಒಟ್ಟು ರೂ.47 ಸಾವಿರ ಧನಸಹಾಯವನ್ನು ವಿತರಿಸಿದರು.
ಆ.2ರಂದು ಊರಿನ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರದಂತೆ ಶೈಕ್ಷಣಿಕ ನೆರವು ನೀಡಲಾಯಿತು. ಉಳಿದ ರೂ.17 ಸಾವಿರವನ್ನು ಸಮಾಜ ಸೇವಾ ಸಂಸ್ಥೆಗಳಿಗೆ ಸಹಾಯಧನವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಅರೆಕ್ಕಲ್ ರಾಮಚಂದ್ರ ಭಟ್, ರಾಘವೇಂದ್ರ ತಾಮನ್ಕರ್, ನಾಮದೇವ ರಾವ್ ಸೇರಿದಂತೆ ತಾಮನ್ಕರ್ ಕುಟುಂಬದ ಬಂಧುಗಳು ಉಪಸ್ಥಿತರಿದ್ದರು.
ಶಂಕರ್ ಎನ್. ತಾಮನ್ಕರ್ ಅವರ ಸಮಾಜಮುಖಿ ಹಾಗೂ ಉದಾತ್ತ ಕಾರ್ಯವು ಇತರರಿಗೂ ಮಾದರಿಯಾಗಲಿ ಎಂದು ಗಣ್ಯರು ಹಾರೈಸಿದರು.











