August 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿವೃತ್ತ ಶಿಕ್ಷಕ ಶಂಕರ್ ಎನ್. ತಾಮನ್ಕರ್ ಅವರಿಂದ ರೂ.47 ಸಾವಿರ ಧನಸಹಾಯ

ಮುಂಡಾಜೆ: ನಿವೃತ್ತ ಶಿಕ್ಷಕ ಹಾಗೂ ಕವಿ ಶಂಕರ್ ಎನ್. ತಾಮನ್ಕರ್ ಅವರು ತಮ್ಮ ತಂದೆ ದಿ. ನಾರಾಯಣ ತಾಮನ್ಕರ್ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ಶೈಕ್ಷಣಿಕ ಹಾಗೂ ಆರೋಗ್ಯ ಸಹಾಯದ ಅಂಗವಾಗಿ ಈ ಬಾರಿ ಎಂಟು ಅರ್ಹ ಫಲಾನುಭವಿಗಳಿಗೆ ಒಟ್ಟು ರೂ.47 ಸಾವಿರ ಧನಸಹಾಯವನ್ನು ವಿತರಿಸಿದರು.

ಆ.2ರಂದು ಊರಿನ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರದಂತೆ ಶೈಕ್ಷಣಿಕ ನೆರವು ನೀಡಲಾಯಿತು. ಉಳಿದ ರೂ.17 ಸಾವಿರವನ್ನು ಸಮಾಜ ಸೇವಾ ಸಂಸ್ಥೆಗಳಿಗೆ ಸಹಾಯಧನವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅರೆಕ್ಕಲ್ ರಾಮಚಂದ್ರ ಭಟ್, ರಾಘವೇಂದ್ರ ತಾಮನ್ಕರ್, ನಾಮದೇವ ರಾವ್ ಸೇರಿದಂತೆ ತಾಮನ್ಕರ್ ಕುಟುಂಬದ ಬಂಧುಗಳು ಉಪಸ್ಥಿತರಿದ್ದರು.

ಶಂಕರ್ ಎನ್. ತಾಮನ್ಕರ್ ಅವರ ಸಮಾಜಮುಖಿ ಹಾಗೂ ಉದಾತ್ತ ಕಾರ್ಯವು ಇತರರಿಗೂ ಮಾದರಿಯಾಗಲಿ ಎಂದು ಗಣ್ಯರು ಹಾರೈಸಿದರು.

Related posts

ಭತ್ತದ ತಳಿಗಳ ಸಂರಕ್ಷಕ ಬಿ.ಕೆ. ದೇವ ರಾವ್‌ಗೆ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ

Suddi Udaya

ಅಳದಂಗಡಿ: ಲುಕ್ ಮಿ ಲೇಡಿಸ್ ಬ್ಯೂಟಿ ಝೋನ್ ಉದ್ಘಾಟನೆ: ಲೇಡಿಸ್ ಟೈಲರಿಂಗ್ ಮತ್ತು ತರಬೇತಿ ಕೇಂದ್ರ, ಟೈಲರಿಂಗ್ ಮೆಟಿರಿಯಲ್ಸ್ & ಎಂಬ್ರೈಡರಿ ವರ್ಕ್ಸ್

Suddi Udaya

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಪಿಯುಸಿ ಫಲಿತಾಂಶ: ಎಸ್‌ಡಿಎಂ ಪ.ಪೂ. ‘ರೋವರ್ಸ್ ಮತ್ತು ರೇಂಜರ್ಸ್’ ಘಟಕದ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!