25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ಪದಗ್ರಹಣ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ೨೦೨೬ನೇ ಸಾಲಿನ ಪದಗ್ರಹಣ ಸಮಾರಂಭ ಡಿ.೨೩ ರಂದು ಕೊಕ್ಕಡದಲ್ಲಿ ಜರಗಿತು. ಸಂತ ಜೋನರ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯರಾದ ಡಾ. ಶಮಂತ್ ವೈ.ಕೆ. ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಶೋಭಾ ಪಿ. ೨೦೨೫ನೇ ಸಾಲಿನ ವರದಿಯನ್ನು ಮಂಡಿಸಿದರು.

ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟೆçಲ್ಲಾ ಅವರು ಅಧಿಕಾರ ಸ್ವೀಕರಿಸಿದರು. ಧನುಷ್ ಕುಮಾರ್ ಜೈನ್ ಅವರು ಜೆಸಿ ವಾಣಿ ವಾಚಿಸಿದರು. ಪ್ರಜ್ವಲ್ ಲೋಬೊ, ಅಕ್ಷತ್ ರೈ, ರೇಷ್ಮಾ ಡಿ ಅಲ್ಮೇಡಾ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಲಯದ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಅತಿಥಿಗಳಾಗಿ ಬಿ ಪ್ರಾಂತ್ಯದ ವಲಯ ಉಪಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಮಾರ್ಗದರ್ಶನ ನೀಡಿದರು. ನಿಕಟಪೂರ್ವಾಧ್ಯಕ್ಷ ಸಂತೋಷ್ ಜೈನ್, ಕಾರ್ಯದರ್ಶಿ ಚಂದನಾ ಪಿ., ಯುವ ಜೆಸಿ ಅಧ್ಯಕ್ಷ ಶ್ರವಣ್, ಜೆಸಿಲೆಟ್ ದಕ್ಷಾ ಉಪಸ್ಥಿತರಿದ್ದರು.
೨೦೨೬ನೇ ಸಾಲಿನಲ್ಲಿ ಪದಾಧಿಕಾರಿಗಳಾಗಿ ರೇಶ್ಮಿ ಡಿಸೋಜ, ಆದ್ಯಾ ಜೈನ್, ವಿಯೋನ್ ಸುವಾರಿಸ್, ಜೋಯ್ ಬೊತೆಲ್ಲೊ, ದೀಪಿಕಾ, ವಿಕ್ಟರ್ ಸುವಾರಿಸ್, ಜಸ್ವಂತ್ ಪಿರೇರಾ, ದೀಪಾ ವಿ., ಯೋಗಿಶ್ ಎಸ್., ಪ್ರಿಯಾ ಜೆ. ಅಮೀನ್ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಶ್ರೀಧರ ರಾವ್, ಮಾರ್ಗದರ್ಶಿ ಸಮಿತಿಯ ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ಜ್ಯೋತಿ ಹೆಬ್ಬಾರ್, ಜೆನೆವಿವ್ ಫೆರ್ನಾಂಡಿಸ್ ಸಹಕರಿಸಿದರು.

ನೂತನ ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ವಂದಿಸಿದರು. ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಮುರಳೀಧರ, ನಿತ್ಯಾನಂದ ರೈ, ಶಶಿಧರ ನೆಕ್ಕಿಲಾಡಿ, ದತ್ತಾತ್ರೇಯ ಹೆಬ್ಬಾರ್, ಡಾ. ಸುಧಾಕರ್ ಶೆಟ್ಟಿ, ಲವೀನಾ ಪಿಂಟೋ, ಮನೋರಮಾ ಟಿ., ರಫಾಯೆಲ್ ಸ್ಟೆçಲ್ಲಾ, ಡೈಸಿ ಗಲ್ಬಾವೊ ಹಾಗೂ ಮತ್ತಿತರು ಉಪಸ್ಥಿತರಿದ್ದರು.

Related posts

ನಾಲ್ಕೂರು: ಯೈಕುರಿಯಲ್ಲಿ ಹಾಳೆತಟ್ಟೆ ಘಟಕ ಶುಭಾರಂಭ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ : 10 ತಿಂಗಳು ಕಳೆದರೂ ಕಾರ್ಮಿಕರಿಗೆ ಸಿಗದ ಕೂಲಿ, ಬಾಡಿಗೆ

Suddi Udaya

ನಾಳೆ (ಎ.7) ವಿದ್ಯುತ್ ನಿಲುಗಡೆ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಶಾಂತಿವನ ಇದರ ವತಿಯಿಂದ ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಚಂದು ನಾಯ್ಕರಿಗೆ ಸನ್ಮಾನ

Suddi Udaya

ಕುತ್ಲೂರು ಶಾಲೆಗೆ ರಾಜ್ಯ ಮಟ್ಟದ ಕೃಷಿ ರೈತ ರತ್ನ ಪ್ರಶಸ್ತಿ

Suddi Udaya

ಯುಗಾದಿ ನವ ಪಲ್ಲವಕೆ ನಾಂದಿ – ಸ್ನೇಹ ಕೂಟ ಕಾರ್ಯಕ್ರಮ

Suddi Udaya
error: Content is protected !!